masthmagaa.com:
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ರನ್ನ ತಮ್ಮ ಸ್ಥಾನದಿಂದ ಕೆಳಗಿಳಿಸ್ಬೇಕು ಅಂತೇಳಿ ಬಿಜೆಪಿ ಪ್ರತಿಭಟನೆ ನಡೆಸ್ತಿರೋ ಮಧ್ಯೆ.. ವಾರದ ಹಿಂದೆ ಇದೇ ವಿಚಾರವಾಗಿ ದೆಹಲಿ ಹೈಕೋರ್ಟ್ಗೆ ಅರ್ಜಿಯೊಂದು ಸಲ್ಲಿಕೆಯಾಗಿತ್ತು. ಕೇಜ್ರಿವಾಲ್ ಅವ್ರನ್ನ ಸಿಎಂ ಸ್ಥಾನದಿಂದ ತೆಗೀಬೇಕು ಅಂತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹೈಕೋರ್ಟ್ಗೆ ಸಲ್ಲಿಕೆಯಾಗಿತ್ತು. ಇದೀಗ ಇದ್ರ ವಿಚಾರಣೆ ನಡೆಸಿರೋ ಕೋರ್ಟ್ ಅರ್ಜಿಯನ್ನ ನಿರಾಕರಿಸಿದೆ. ʻದೆಹಲಿ ಸಿಎಂ ಸ್ಥಾನದಿಂದ ಕೆಳಗಿಳಿಬೇಕೋ ಬೇಡ್ವೋ ಅನ್ನೋದು ಕೇಜ್ರಿವಾಲ್ ಅವ್ರಿಗೆ ಬಿಟ್ಟ ವಿಚಾರ. ಕೋರ್ಟ್ ಮುಖ್ಯಮಂತ್ರಿಗಳನ್ನ ತೆಗೆಯಲ್ಲʼ ಅಂತೇಳಿದೆ. ಅಂದ್ಹಾಗೆ ಹಿಂದೂ ಸೇನೆಯ ರಾಷ್ಟ್ರಾಧ್ಯಕ್ಷ ವಿಷ್ಣು ಗುಪ್ತಾ ಈ ಅರ್ಜಿ ಸಲ್ಲಿಸಿದ್ರು.
ಇನ್ನು ಅರವಿಂದ್ ಕೇಜ್ರಿವಾಲ್, ಮದ್ಯ ಹಗರಣ, ನ್ಯಾಯಾಂಗ ಬಂಧನ ಅಂತ ಬಹಳ ಸೀರಿಯಸ್ ಆಗಿರೋ ಪರಿಸ್ಥಿತಿ ಮಧ್ಯೆ ಒಂದ್ ರೀತಿ ಹಾಸ್ಯಾಸ್ಪದ ವಿಚಾರ ವರದಿಯಾಗಿದೆ. ಅರವಿಂದ್ ಕೇಜ್ರಿವಾಲ್ ಅವ್ರ ಪತ್ನಿ ಸುನಿತಾ ಕೇಜ್ರಿವಾಲ್ ಅವ್ರು ತಮ್ಮ ಪತಿ ಜೈಲಿನಲ್ಲಿ ಕೂತು ಬರೆದ ಲೆಟರ್ ಒಂದನ್ನ ಓದ್ ಹೇಳಿದ್ದಾರೆ. ಇದ್ರಲ್ಲಿ, ʻಕೇಜ್ರಿವಾಲ್ ಅವ್ರು ತಮ್ಮ ಪಕ್ಷದ ಶಾಸಕರು ತಮ್ಮ ಕ್ಷೇತ್ರಗಳಿಗೆ ಭೇಟಿ ನೀಡ್ತಿದ್ದಾರಾ, ಜನರ ಸಮಸ್ಯೆಗಳ ಬಗ್ಗೆ ಕಾಳಜಿ ವಹಿಸಲಾಗ್ತಿದ್ಯಾʼ ಅಂತ ವಿಚಾರಿಸಲಾಗಿದೆ. ಆದ್ರೆ ಇಲ್ಲಿ ಗಮನಿಸ್ಬೇಕಾದ ಅಂಶ ಇದಲ್ಲ.. ಬದಲಿಗೆ ಈ ಲೆಟರ್ ಓದುವಾಗ ಸುನಿತಾ ಕೇಜ್ರಿವಾಲ್ ಅವ್ರು ಆಫೀಸ್ನಲ್ಲಿ ಕೂತಿದ್ರು. ಅವ್ರ ಬ್ಯಾಕ್ಡ್ರಾಪ್ನಲ್ಲಿ ಮೂರು ಫೋಟೋಗಳನ್ನ ಇರಿಸಲಾಗಿದೆ. ಇವುಗಳ ಪೈಕಿ ಒಂದು ಬದಿಯಲ್ಲಿ ಭಗತ್ ಸಿಂಗ್ ಅವ್ರ ಫೋಟೋ ಇದ್ರೆ…ಇನ್ನೊಂದು ಬದಿಯಲ್ಲಿ ಬಿ ಆರ್ ಅಂಬೇಡ್ಕರ್ ಅವ್ರ ಫೋಟೋ ಇದೆ. ಆದ್ರೆ ಇವೆರಡು ಫೋಟೋಗಳ ಮಧ್ಯದಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ರ ಫೋಟೋ ಇಡಲಾಗಿದೆ… ಕೇಜ್ರಿವಾಲ್ ಜೈಲಿನ ಕಂಬಿಗಳ ಹಿಂದೆ ಇರೋ ಫೋಟೋ ಇರಿಸಲಾಗಿದೆ. ಸೋ ಸುನಿತಾ ಕೇಜ್ರಿವಾಲ್ ಅವ್ರು ಲೆಟರ್ ಓದಿ ಹೇಳೋ ವೇಳೆ ಈ ಫೋಟೋನೆ ಹೈಲೈಟ್ ಆಗಿದೆ.
-masthmagaa.com
Contact Us for Advertisement