masthmagaa.com:
ರಾಷ್ಟ್ರ ರಾಜಧಾನಿ ದೆಹಲಿಗೆ ಮುತ್ತಿಗೆ ಹಾಕೋಕೆ ರೈತರು ಹವಣಿಸ್ತಿರೋ ಟೈಮಲ್ಲೇ ದೆಹಲಿ ಹೈಕೋರ್ಟ್ಗೆ ಸ್ಪೋಟದ ಬೆದರಿಕೆ ಬಂದಿದೆ. ಬುಧವಾರ ತಡರಾತ್ರಿ ರಿಜಿಸ್ಟ್ರಾರ್ ಜನರಲ್ಗೆ ಮೇಲ್ ಮೂಲಕ ಈ ಬೆದರಿಕೆ ಬಂದಿದೆ. ಹೀಗಾಗಿ ಕೋರ್ಟ್ನ ಸುತ್ತಮುತ್ತ ಪೊಲೀಸರು ಹಾಗೂ ಸ್ಪೋಟಕ ನಿಷ್ಕ್ರಿಯ ಪಡೆ ತಪಾಸಣೆ ನಡೆಸಿದ್ದು, ಬಿಗಿ ಬಂದೋಬಸ್ತ್ ಮಾಡಲಾಗಿದೆ. ಇನ್ನು ಈ ಪ್ರಕರಣ ಕುರಿತು ದೆಹಲಿ ಪೋಲಿಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದಾರೆ.
-masthmagaa.com
Contact Us for Advertisement