masthmagaa.com:
ಮಹಾರಾಷ್ಟ್ರದ ನಾಗ್ಪುರ್ನಲ್ಲಿ ದೀಪಾವಳಿ ಬೋನಸ್ ಕೊಡಲಿಲ್ಲ ಅಂತ ಇಬ್ಬರು ಕಾರ್ಮಿಕರು ಢಾಬಾ ಮಾಲೀಕನನ್ನ ಕೊಂದು ಎಸ್ಕೇಪಾಗಿದ್ದಾರೆ. ಮಧ್ಯಪ್ರದೇಶ ಮೂಲದ ಆದಿ ಮತ್ತು ಛೋಟು ಎಂಬ ಕಾರ್ಮಿಕರು ಊಟ ಮಾಡಿ ಮಲಗಿದ್ದ ತಮ್ಮ ಮಾಲೀಕ ಧೆಂಗ್ರೆ ಅನ್ನೋರನ್ನ ಹರಿತವಾದ ಆಯುಧದಿಂದ ಚುಚ್ಚಿ ಕೊಂದಿದ್ದಾರೆ. ನಂತರ ಅದೇ ಓನರ್ನ ಕಾರಿನಲ್ಲೇ ಪರಾರಿಯಾಗಿದ್ದಾರೆ. ನಾಗ್ಪುರ್ ಪೊಲೀಸರು ಆರೋಪಿಗಳನ್ನು ಹಿಡಿಯಲು ಬಲೆ ಬೀಸಿದ್ದಾರೆ.
-masthmagaa.com
Contact Us for Advertisement