masthmagaa.com:
ಶುಕ್ರವಾದ ಸಂಸತ್ನಲ್ಲಿ ಶುರುವಾದ ಬಜೆಟ್ ಸೆಶನ್ನಲ್ಲಿ ಸಂಸದ ಡಿಕೆ ಸುರೇಶ್ ಪ್ರತ್ಯೇಕ ರಾಷ್ಟ್ರ ಹೇಳಿಕೆ ಸದ್ದು ಮಾಡಿದೆ. ಡಿಕೆ ಸುರೇಶ್ ಹೇಳಿಕೆಗೆ ಕಾಂಗ್ರೆಸ್ ಕ್ಷಮೆ ಕೇಳ್ಬೇಕು ಅಂತ ಬಿಜೆಪಿ ಶಾಸಕರು ಒತ್ತಾಯಿಸಿದ್ದಾರೆ. ಲೋಕಸಭಾ ಸಂಸದರಾಗಿ ಸುರೇಶ್ ದೇಶ ಒಡೆಯೋ ಮಾತಾಡಿದ್ದಾರೆ ಅಂತ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ದೇಶ ಒಡೆಯೋ ಮಾತನ್ನ ಯಾರೇ ಆಡಿದರೂ ನಾವದನ್ನ ಸಹಿಸೋಲ್ಲ. ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ನಾವು ಒಂದೇ. ಭಾರತ ಅಖಂಡವಾಗಿರಲಿ ಅಂತ ಖರ್ಗೆ ಹೇಳಿದ್ದಾರೆ.
-masthmagaa.com
Contact Us for Advertisement