masthmagaa.com:
ತಮಿಳುನಾಡು ಸಿಎಂ ಎಂ. ಕೆ. ಸ್ಟಾಲಿನ್ ಮತ್ತು ಅಲ್ಲಿನ ರಾಜ್ಯಪಾಲ ಆರ್.ಎನ್. ರವಿ ನಡುವಿನ ಹಗ್ಗಜಗ್ಗಾಟ ಮುಂದುವರೆದಿದೆ. ಇದೀಗ 2024ರ ಚುನಾವಣೆವರೆಗೂ ರವಿ ಅವ್ರನ್ನ ರಾಜ್ಯಪಾಲ ಹುದ್ದೆಯಿಂದ ತೆಗೆದುಹಾಕ್ಬೇಡಿ ಅಂತ ಸ್ಟಾಲಿನ್ ವ್ಯಂಗ್ಯ ಮಾಡಿದ್ದಾರೆ. ಮದುವೆ ಕಾರ್ಯಕ್ರಮವೊಂದ್ರಲ್ಲಿ ಮಾತನಾಡಿರೋ ಸ್ಟಾಲಿನ್ , ತಮಿಳುನಾಡು ರಾಜ್ಯಪಾಲರನ್ನ ಚೇಂಜ್ ಮಾಡಬೇಡಿ ಅಂತ ನಾನು ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರಿಗೆ ರಿಕ್ವೆಸ್ಟ್ ಮಾಡ್ತೇನೆ. ಅವರನ್ನ ಲೋಕಸಭಾ ಚುನಾವಣೆ ಆಗೋ ತನಕ ಕಂಟಿನ್ಯೂ ಮಾಡೋದಕ್ಕೆ ಬಿಡಿ ಪಾಪ. ಅವರು ತಮ್ಮ ತಲೆಗೆ ಬಂದಿದೆಲ್ಲಾ ಹೇಳ್ತಾರೆ. ಆದ್ರೆ ಜನರು ಅವರ ಮಾತನ್ನ ಸೀರಿಯಸ್ ಆಗಿ ತಗೋಳಲ್ಲ. ಕೆಲವರು ದೊಡ್ಡ ಪೋಸ್ಟ್ನ್ನ ಪಡೆದು ರಾಜ್ ಭವನದಂತಹ ದೊಡ್ಡ ಬಂಗಲೆಯಲ್ಲಿ ಕೂತಿರೋದು ವೇಸ್ಟ್. ಯಾಕಂದ್ರೆ ಅವರು ʻದ್ರಾವಿಡʼ ಅಂದ್ರೆ ಏನೆಂದು ಕೇಳ್ತಾ ಇದ್ದಾರೆ ಅಂತ ವ್ಯಂಗ್ಯವಾಗಿ ಮಾತನಾಡಿದ್ದಾರೆ.
-masthmagaa.com
Contact Us for Advertisement