ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ವಿರುದ್ದ ಪೋಲಿಸರಿಗೆ ದೂರು!

masthmagaa.com:

ಬಿಜೆಪಿ ಪ್ರಭಾವಿ ನಾಯಕರ ವಿರುದ್ದ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ವಿರುದ್ದ ಚುನಾವಣಾ ಆಯೋಗ ಪೋಲಿಸರಿಗೆ ದೂರು ನೀಡಿದೆ. ಕಾರ್ಯಕರ್ತರ ಸಭೆ ಒಂದರ ವೇಳೆ ಯತೀಂದ್ರ, ಗೃಹ ಸಚಿವ ಅಮಿತ್‌ ಶಾರನ್ನ ಗೂಂಡಾ, ರೌಡಿ, ಅವ್ರ ವಿರುದ್ಧ ಕ್ರಿಮಿನಲ್‌ ಕೇಸ್‌ಗಳಿವೆ. ಅಮಿತ್‌ ಶಾ ಹಾಗೂ ಪ್ರಧಾನಿ ಮೋದಿ ಗುಜರಾತ್‌‌ನಲ್ಲಿ ನರಮೇಧ ನಡೆಸಿದ್ದಾರೆ ಅಂತೇಳಿದ್ರು. ಇದೀಗ ಈ ವಿಚಾರವಾಗಿ ಚಾಮರಾಜ ನಗರ ಜಿಲ್ಲೆಯ ಹನೂರು ಪೋಲಿಸ್‌ ಠಾಣೆಯಲ್ಲಿ ಚುನಾವಣಾ ಆಯೋಗದ ಅಧಿಕಾರಿಗಳು ದೂರು ನೀಡಿದ್ದಾರೆ.

-masthmagaa.com

Contact Us for Advertisement

Leave a Reply