ಈಕ್ವೆಡಾರ್‌ನಲ್ಲಿ ಮತ್ತೆ ಗಲಭೆ: ಸರ್ಕಾರಿ ಅಧಿಕಾರಿಗಳ ಮೇಲು ದಾಳಿ!

masthmagaa.com:

ಈಕ್ವೆಡಾರ್‌ನಲ್ಲಿ ಗಲಭೆ ಹೆಚ್ಚಾಗಿ ಪರಿಸ್ಥಿತಿ ವಿಕೋಪಕ್ಕೆ ತಿರುಗ್ತಿದೆ. ಅಲ್ಲಿನ ಮಾಧ್ಯಮದ ಕಛೇರಿ ಒಂದ್ರ ಮೇಲೆ ಬಂಡುಕೋರರು ದಾಳಿ ನಡೆಸಿದ್ರು. ಈ ಕೇಸ್‌ನ ವಿಚಾರಣೆಗೆ ಹೋಗ್ತಿದ್ದ ಸರ್ಕಾರಿ ವಕೀಲರೊಬ್ರನ್ನ ಬುಧವಾರ ದುಷ್ಕರ್ಮಿಗಳು ಗುಂಡಿಟ್ಟು ಕೊಂದಿದ್ದಾರೆ. ಮಾಧ್ಯಮದ ಕಛೇರಿ ಮೇಲೆ ದಾಳಿ ನಡೆಸಿದ್ದ ಬಂಡುಕೋರರೆ ಇವ್ರನ್ನ ಹತ್ಯೆ ಮಾಡಿದ್ದಾರೆ ಅಂತ ಹೇಳಲಾಗ್ತಿದೆ. ಅಂದ್ಹಾಗೆ ಇದ್ದಕ್ಕಿದ್ದಂತೆ ಹಿಂಸಾಚಾರ ಭುಗಿಲೆದ್ದಿರೋ ಈಕ್ವೆಡಾರ್‌ನಲ್ಲಿ ಸದ್ಯ 60 ದಿನಗಳ ಎಮರ್ಜೆನ್ಸಿ ಘೋಷಿಸಲಾಗಿದೆ.

-masthmagaa.com

Contact Us for Advertisement

Leave a Reply