masthmagaa.com:
ಜಲ ಜೀವನ್ ಮಿಷನ್ ಯೋಜನೆಯ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆಯ ತನಿಖೆಯ ಭಾಗವಾಗಿ ಇ.ಡಿ (ಜಾರಿ ನಿರ್ದೇಶನಾಲಯ) ರಾಜಸ್ಥಾನದ 25 ಸ್ಥಳಗಳಲ್ಲಿ ದಾಳಿ ನಡೆಸಿದೆ. ರಾಜಸ್ಥಾನದ ಜೈಪುರ ಮತ್ತು ದೌಸ ಸೇರಿದಂತೆ, ಪಬ್ಲಿಕ್ ಹೆಲ್ತ್ ಇಂಜಿನಿಯರಿಂಗ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸುಬೋಧ್ ಅಗರ್ವಾಲ್ ಅವ್ರ ಮನೆ ಮೇಲೆ ತನಿಖಾ ಸಂಸ್ಥೆ ಶುಕ್ರವಾರ ಅಂದ್ರೆ ಇಂದು ದಾಳಿ ನಡೆಸಿದೆ. ಈ ಹಗರಣಕ್ಕೆ ಸಂಬಂಧಿಸಿದಂತೆ ಇಂಜಿನಿಯರ್ಸ್, ಕಾಂಟ್ರ್ಯಾಕ್ಟರ್ಸ್ ಮತ್ತು ರಾಜಸ್ಥಾನದ ಮಾಜಿ ಸರ್ಕಾರಿ ಅಧಿಕಾರಿಗಳಿಗೆ ಲಿಂಕ್ ಇರೋ ಅನುಮಾನದ ಮೇಲೆ, ಇವ್ರ ಮೇಲೂ ತನಿಖೆಯನ್ನ ನಡೆಸುತ್ತಿದ್ದಾರೆ. ಈ ತನಿಖೆಯನ್ನ ಅಕ್ರಮ ಹಣ ವರ್ಗಾವಣೆ ಕಾಯ್ದೆ ಅಡಿಯಲ್ಲಿ ನಡೆಸಲಾಗ್ತಾ ಇದೆ. ಅಂದ್ಹಾಗೆ ಸೆಪ್ಟೆಂಬರ್ 1 ರಂದು ಕೂಡ ಇದೇ ರೀತಿಯಲ್ಲಿ ಇಡಿ ಅಧಿಕಾರಿಗಳು ರಾಜಸ್ಥಾನದ ಹಲವು ಸಿಟಿಗಳಲ್ಲಿ ದಾಳಿಯನ್ನ ನಡೆಸಿತ್ತು.
-masthmagaa.com
Contact Us for Advertisement