ಅರಣ್ಯ ಹಗರಣ: ಉತ್ತರಾಖಂಡ ಕಾಂಗ್ರೆಸ್‌ ನಾಯಕನ ಬೆನ್ನು ಹತ್ತಿದ ED!

masthmagaa.com:

ಫಾರೆಸ್ಟ್‌ ಸ್ಕ್ಯಾಮ್‌ ಅಥವಾ ಅರಣ್ಯ ಹಗರಣ ಕೇಸ್‌ಗೆ ಸಂಬಂಧಪಟ್ಟಂತೆ ED ದೆಹಲಿ, ಉತ್ತರಾಖಂಡ ಮತ್ತು ಚಂಡೀಗಢದ 17 ಪ್ರದೇಶಗಳಲ್ಲಿ ದಾಳಿ ನಡೆಸಿದೆ. ಈ ವೇಳೆ ಕಾಂಗ್ರೆಸ್‌ ನಾಯಕ ಹರಕ್‌ ಸಿಂಗ್‌ ರಾವತ್‌ ಅವ್ರ ಡಿಫೆನ್ಸ್‌ ಕಾಲೊನಿ ನಿವಾಸ ಹಾಗೂ ಡೆಹ್ರಾಡೂನ್‌ನಲ್ಲಿರೋ ಮೆಡಿಕಲ್‌ ಕಾಲೇಜ್‌ನಲ್ಲೂ ಪರಿಶೀಲನೆ ನಡೆಸಲಾಗಿದೆ. ಈ ಅರಣ್ಯ ಹಗರಣ ಕೇಸ್‌ಗೂ ಹರಕ್‌ ಸಿಂಗ್‌ ರಾವತ್‌ಗೂ ಲಿಂಕ್‌ ಇದೆ ಅನ್ನೋ ಆರೋಪದ ಮೇಲೆ ED ತಂಡ ಈ ದಾಳಿಗೆ ಮುಂದಾಗಿತ್ತು. ಸಾವಿರಾರು ಮರಗಳನ್ನ ಕಡಿದ, ಹಣಕಾಸಿನ ಅಕ್ರಮ ನಡೆಸಿದ, 2019ರಲ್ಲಿ ಕಾರ್ಬೋಟ್‌ ನ್ಯಾಷನಲ್‌ ಪಾರ್ಕ್‌ನಲ್ಲಿ ಅಕ್ರಮ ನಿರ್ಮಾಣ ಚಟುವಟಿಕೆಯಲ್ಲಿ ತೊಡಗಿದ್ದ ಆರೋಪ ರಾವತ್‌ ಮೇಲಿದೆ.

-masthmagaa.com

Contact Us for Advertisement

Leave a Reply