ಲೋಕಸಭೆ ಎಲೆಕ್ಷನ್‌ಗಾಗಿ ಮಹಾ ಸಿಎಂರಿಂದ “ಶಿವಸಂಕಲ್ಪ” ಅಭಿಯಾನ!

masthmagaa.com:

ಮುಂಬರುವ ಲೋಕಸಬಾ ಚುನಾವಣೆಯ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್‌ ಶಿಂಧೆ “ಶಿವಸಂಕಲ್ಪ” ಅಭಿಯಾನ ಘೋಷಿಸಿದ್ದಾರೆ. ಈ ಮೂಲಕ ಲೋಕಸಭೆ ಎಲೆಕ್ಷನ್‌ ಪ್ರಚಾರಕ್ಕೆ ಭರ್ಜರಿ ತಯಾರಿ ನಡೆಸ್ತಿರೋ ಶಿಂಧೆ ‘ಶಿವಸಂಕಲ್ಪ ಅಭಿಯಾನವನ್ನ ಜನವರಿ 6 ರಿಂದ ಯವತ್ಮಾಲ್-ವಾಶಿಮ್ ಕ್ಷೇತ್ರದಿಂದ ಪ್ರಾರಂಭ ಮಾಡಲಿದ್ದಾರೆ. ಈ ವೇಳೆ ಶಿವಸೇನೆ( ಏಕನಾಥ ಶಿಂದೆ ಬಣ), ಬಿಜೆಪಿ ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ(ಎನ್‌ಸಿಪಿ) ಅಜಿತ್ ಪವಾರ್ ಬಣಗಳ ಆಡಳಿತಾರೂಢ ಮೈತ್ರಿಕೂಟ ಅಥವಾ ‘ಮಹಾಯುತಿ’ ನಾಯಕರು ಭಾಗಿಯಾಗಲಿದ್ದಾರೆ ಅಂತ ಹೇಳಲಾಗ್ತಿದೆ. ಈ ಅಭಿಯಾನದ ಭಾಗವಾಗಿ ಮಹಾರಾಷ್ಟ್ರದ 48 ಕ್ಷೇತ್ರಗಳಲ್ಲಿಯೂ ಪ್ರವಾಸ ಮಾಡುವ ಸಂಕಲ್ಪವನ್ನ ಶಿಂಧೆ ಹೊಂದಿದ್ದಾರೆ ಅಂತ ತಿಳಿದು ಬಂದಿದೆ.

-masthmagaa.com

Contact Us for Advertisement

Leave a Reply