masthmagaa.com:
ಏಪ್ರಿಲ್ 19ರಂದು ಮಣಿಪುರದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆ ವೇಳೆ ಗಲಭೆ ನಡೆದಿತ್ತು. ಸೋ ಇದೀಗ ಮಣಿಪುರದ ಇನ್ನರ್ ಲೋಕಸಭಾ ಕ್ಷೇತ್ರದ 11 ಮತಗಟ್ಟೆಗಳಲ್ಲಿ ಏಪ್ರಿಲ್ 22ರಂದು ಮರುಚುನಾವಣೆ ನಡೆಯಲಿದೆ. ಹೀಗಂತ ಚುನಾವಣಾ ಆಯೋಗ ಅನೌನ್ಸ್ ಮಾಡಿದೆ. ಅಂದ್ಹಾಗೆ ಏಪ್ರಿಲ್ 19ರಂದು ಇನ್ನರ್ ಲೋಕಸಭಾ ಕ್ಷೇತ್ರದ ಕೆಲ ಮತಗಟ್ಟೆಗಳಲ್ಲಿ ಶಸ್ತ್ರಧಾರಿ ದುಷ್ಕರ್ಮಿಗಳ ಗುಂಪೊಂದು ಗುಂಡಿನ ದಾಳಿ ನಡೆಸಿತ್ತು. ವೋಟ್ ಹಾಕೋಕೆ ಬಂದ ಜನರಿಗೆ ಬೆದರಿಕೆ ನೀಡಿ…. ಚುನಾವಣಾ ದಾಖಲೆಗಳನ್ನ ಸುಟ್ಟು ಹಾಕಿ, EVM ಧ್ವಂಸಗೊಳಿಸಿದ್ರು.
ಇನ್ನೊಂದ್ಕಡೆ ಇದೇ ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಟ್ರಕ್ ಚಾಲಕರು ತಮ್ಮ ಸ್ಟೇರಿಂಗ್ ಬಿಟ್ಟು ಬೀದಿಗಿಳಿದು ಪ್ರತಿಭಟನೆ ನಡೆಸಲು ರೆಡಿಯಾಗಿದ್ದಾರೆ. ಇತ್ತೀಚೆಗೆ ಆಯಿಲ್ ಟ್ಯಾಂಕರ್ ಒಂದ್ರ ಮೇಲೆ ನಡೆದಿರೋ ಉಗ್ರಗಾಮಿಗಳ ದಾಳಿ ಖಂಡಿಸಿ, ಟ್ರಕ್ಗಳ ರಕ್ಷಣೆಗಾಗಿ ಪ್ರತಿಭಟನೆ ನಡೆಸೋದಾಗಿ ಘೋಷಿಸಿದ್ದಾರೆ.
-masthmagaa.com
Contact Us for Advertisement