masthmagaa.com:
ಹನುಮಾನ ಚಾಲೀಸಾವನ್ನ ಕೇಳೊದು ಕೂಡ ಕಾಂಗ್ರೆಸ್ ಆಡಳಿತದಲ್ಲಿ ಅಪರಾಧವಾಗಿದೆ ಅಂತ ಪ್ರಧಾನಿ ಮೋದಿ ಆರೋಪಿಸಿದ್ದಾರೆ. ರಾಜಸ್ತಾನದ ಬನ್ಸ್ವಾರಾದಲ್ಲಿ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಮೋದಿ, ಕಾಂಗ್ರೆಸ್ ಆಡಳಿತದಲ್ಲಿ ಒಬ್ರ ನಂಬಿಕೆಗಳನ್ನ ಅನುಸರಿಸೊದು ಕಷ್ಟ. ಈಗ INDI ಮೈತ್ರಿಕೂಟ ನನ್ನ ವಿರುದ್ದ ಬಹಳಷ್ಟು ಟೀಕೆ ಮಾಡ್ತಿದೆ. ಆದ್ರೆ ಸತ್ಯಕ್ಕೆ ಹೆದರಿ ಏಕೆ ತನ್ನ ನೀತಿಗಳನ್ನ ಮರೆ ಮಾಚ್ತಿದೆ. ಅಲ್ದೇ ನಿಮ್ಮ ಸಂಪತ್ತನ್ನ ಕಿತ್ಕೊಂಡು ಕೆಲ ಆಯ್ದ ಜನರಿಗೆ ಅದನ್ನೆಲ್ಲ ಹಂಚಲು ಕಾಂಗ್ರೆಸ್ ಸಂಚು ರೂಪಿಸ್ತಿದೆ ಅಂತ ಮೋದಿ ಕೈ ವಿರುದ್ದದ ತಮ್ಮ ನಿಲುವನ್ನ ಪುನರುಚ್ಚಾರ ಮಾಡಿದ್ದಾರೆ.
-masthmagaa.com
Contact Us for Advertisement