ಬಿಹಾರ್‌: ನಿವೃತ್ತ ಯೋಧನ ಹತ್ಯೆ ಮಾಡಿದ ಆರೋಪಿಗಳನ್ನ ಹಿಡಿದು ಕೊಂದ ಸ್ಥಳೀಯರು

masthmagaa.com:

ನಿವೃತ್ತ ಯೋಧನಿಗೆ ಗುಂಡು ಹಾರಿಸಿ ಹತ್ಯೆ ಮಾಡಿರೋ ಆರೋಪಿಗಳನ್ನ ಊರ ಜನರೆಲ್ಲಾ ಸೇರಿ ಹೊಡೆದು ಸಾಯಿಸಿರೋ ಘಟನೆ ಬಿಹಾರ್‌ನ ಸಸಾರಂನಲ್ಲಿ ನಡೆದಿದೆ. ಗುಂಡಿನ ದಾಳಿಗೆ ಬಲಿಯಾದ ನಿವೃತ್ತ ಯೋಧನನ್ನ ಬಿಜೇಂದ್ರ ಸಿಂಗ್‌ ಅಂತ ಗುರುತಿಸಲಾಗಿದೆ. ಬೈಕ್‌ನಲ್ಲಿ ಬಂದಿದ್ದ ದುಷ್ಕರ್ಮಿಗಳು ಬಿಜೇಂದ್ರ ಅವರ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿ ಅಲ್ಲಿಂದ ಪರಾರಿಯಾಗಲು ಪ್ರಯತ್ನಿಸಿದ್ದಾರೆ. ಈ ವೇಳೆ ದುಷ್ಕರ್ಮಿಗಳಾದ ಮಿತಿಲೇಶ್‌ ಕುಮಾರ್‌ ಮತ್ತು ಆದಿತ್ಯ ಕುಮಾರ್‌ ಅನ್ನೋರನ್ನ ಊರ ಜನರೆಲ್ಲಾ ಸೇರಿ ಸರಿಯಾಗಿ ಥಳಿಸಿ ಹತ್ಯೆ ಮಾಡಿದ್ದಾರೆ. ಇನ್ನು ಮತ್ತೊಬ್ಬ ಆರೋಪಿಗೆ ಸಿಕ್ಕಾಪಟ್ಟೆ ಥಳಿಸಿರೋ ಕಾರಣ ಸದ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಂದ್ಹಾಗೆ ಬಿಜೇಂದ್ರ ಸಿಂಗ್‌ ಅವ್ರ ಹತ್ಯೆಯನ್ನ ದ್ವೇಷದ ಕಾರಣಕ್ಕೆ ಮಾಡಲಾಗಿದೆ ಅಂತ ವರದಿಯಾಗಿದೆ.

-masthmagaa.com

Contact Us for Advertisement

Leave a Reply