masthmagaa.com:
ಯಾಕೋ ಕುಮಾರಸ್ವಾಮಿಯವರು ಎರಡ್ಮೂರು ದಿನಗಳಿಂದ ರಾಜ್ಯ ನಾಯಕರ ವಿರುದ್ದ ಭಾರಿ ಆಕ್ರೋಶ ಗೊಂಡಿರೋ ರೀತಿ ಕಾಣಿಸ್ತಿದೆ. ನಿನ್ನೆ ಮೊನ್ನೆಯೆಲ್ಲಾ ಕಾಂಗ್ರೆಸ್ ನಾಯಕರ ಮೇಲೆ ಟೀಕಾಸ್ತ್ರ ಬಿಟ್ಟಿದ್ದ ಕುಮಾರಸ್ವಾಮಿ ಇಂದು ನೇರವಾಗಿ ಸಚಿವ ಅಶ್ವತ್ ನಾರಾಯಣ್ ಮೇಲೆ ಗದಾ ಪ್ರಹಾರ ಮಾಡಿದ್ದಾರೆ. ʻನಕಲಿ ಸರ್ಟಿಫಿಕೇಟ್ ರಾಜ, ನಕಲಿ ಸರ್ಟಿಫಿಕೇಟ್ ಶೂರʼ ನನ್ನನ್ನು ಹುಡುಕುತ್ತಿದ್ದಾರೆ. ಕಣ್ಣಿಗೆ ಕಾಮಾಲೆಯಾದರೂ ಬಂದಿರಬೇಕು, ಜಾಣ ಕುರುಡಾದರೂ ಇರಬೇಕು ಅಂತ ಹಿಗ್ಗಾಮುಗ್ಗಾ ಜಾಡಿಸಿದ್ದಾರೆ. ಅಲ್ದೇ ನಾನು ವಿರೋಧ ಪಕ್ಷದ ನಾಯಕ. ಅಧಿವೇಶನಕ್ಕೆ ಆಗ್ರಹಿಸುವುದು ನನ್ನ ಹಕ್ಕು. ಸದನದಲ್ಲಿ ಉತ್ತರಿಸುವ ಯೋಗ್ಯತೆ ಇದ್ದರೆ ಹಾರಿಕೆ ಉತ್ತರಗಳ ಕೊಟ್ಟು ಯಾಕ್ ಜಾರಿಕೊಳ್ಳುತ್ತಿದ್ದೀರಾ. ಕಲಾಪ ಅಂದ್ರೆ ಮೈ ಬೆಚ್ಚಗಾಗುತ್ತಾ? ಪಿಎಸ್ಐ ಅಕ್ರಮ, ಪ್ರಾಧ್ಯಾಪಕರ ಕರ್ಮಕಾಂಡ, ಅಧಿಕಾರಿಗಳನ್ನು ಒಳಕ್ಕೆ ಹಾಕಿಕೊಂಡು ಡೀಲ್ ಮಾಡುವ ಅಶ್ವತ್ಥನಾರಾಯಣ, ಇದೇನಾ ನೀವು ನೀಡುತ್ತಿರುವ ಉನ್ನತ ಶಿಕ್ಷಣ. ಸಂಘ ಕಲಿಸಿರೋ ಶಿಕ್ಷಣ, ಹೇಳಿ ಡೀಲ್ ಅಶ್ವತ್ಥನಾರಾಯಣ್ ಅಂತ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಮುಂಚೆ ಆಪರೇಷನ್ ಕಮಲ ಮಾಡಿದ್ದಕ್ಕೆ ದಕ್ಷಿಣಿಯಾಗಿ ಉಪ ಮುಖ್ಯಮಂತ್ರಿ ಆಗಿದ್ರಿ, ಕೊನೆಗೆ ಮಂತ್ರಿಗಿರಿಯಷ್ಟೇ ಉಳೀತು. ಬೊಮ್ಮಾಯಿ ಸಂಪುಟದ ಆದ್ಯತಾ ಪಟ್ಟಿಯಲ್ಲಿ ತಾವೆಷ್ಟು ದೂರ ಇದ್ದೀರಿ ಎನ್ನುವುದು ಗೊತ್ತಿದೆ. ಆಗೇಕೆ ನೀವು ʼಠಮ ಠಮ ಠಮʼ ಸದ್ದು ಮಾಡಲಿಲ್ಲ.. ಆಗ ಎಲ್ಲಿದ್ಯಪ್ಪ ಅಶ್ವತ್ಥನಾರಾಯಣ ಅಂತ ತಿರುಗೇಟು ಕೊಟ್ಟಿದ್ದಾರೆ.
-masthmagaa.com
Contact Us for Advertisement