ಭಗವಂತ ಶ್ರೀರಾಮ ಕೇವಲ ಹಿಂದೂಗಳಿಗೆ ಮಾತ್ರ ಸೇರಿಲ್ಲ! ಹೇಳಿದ್ಯಾರು?

masthmagaa.com:

ಭಗವಾನ್ ಶ್ರೀರಾಮರು ಎಲ್ಲರಿಗೂ ಸೇರಿದವರು, ಕೇವಲ ಹಿಂದೂ ಧರ್ಮದವ್ರಿಗೆ ಮಾತ್ರ ಸೇರಿಲ್ಲ ಅಂತ ಜಮ್ಮು-ಕಾಶ್ಮೀರ ಮಾಜಿ ಸಿಎಂ ಫಾರೂಕ್‌ ಅಬ್ದುಲ್ಲ ಹೇಳಿದ್ದಾರೆ. ಧರ್ಮದ ವಿಚಾರಗಳನ್ನ ಇಟ್ಕೊಂಡು ದ್ವೇಷ ಬಿತ್ತೋ ರಾಜಕಾರಣಿಗಳಿಂದ ಎಚ್ಚರವಾಗಿರಿ ಅಂತ ಅಬ್ದುಲ್ಲಾ ಹೇಳಿದ್ದಾರೆ. ಸಾರ್ವಜನಿಕ ರ್ಯಾಲಿ ಒಂದ್ರಲ್ಲಿ ಮಾತಾನಾಡುತ್ತಾ ಧಾರ್ಮಿಕ ವಿಭಜನೆಯನ್ನ ಸೃಷ್ಠಿಸಿ ನಮ್ಮ ಪಕ್ಷವನ್ನ ವೀಕ್‌ ಮಾಡೋಕೆ ನೋಡ್ತಿದ್ದಾರೆ. ಚುನಾವಣೆ ಸಮಯದಲ್ಲಿ ಹಿಂದೂಗಳು ಡೇಂಜರ್‌ನಲ್ಲಿ ಇದಾರೆ ಅಂತ ಹೇಳ್ತಾರೆ. ಅದಕ್ಕೆ ನೀವು ಬಲಿಯಾಗ್ಬೇಡಿ ಅಂತ ಹೇಳಿದ್ದಾರೆ. ಹಾಗೂ ಇಲ್ಲಿ ಯಾವ ಧರ್ಮನೂ ಕೆಟ್ಟದ್ದಲ್ಲ. ಆದ್ರೆ ಮನುಷ್ಯನೇ ಭ್ರಷ್ಟಾಚಾರಿ ಅಂತ ಹೇಳಿದಾರೆ.

-masthmagaa.com

Contact Us for Advertisement

Leave a Reply