masthmagaa.com:
ಸ್ವಯಂ ಘೋಷಿತ ದೇವಮಾನವ ಸ್ವಾಮಿ ನಿತ್ಯಾನಂದ ತನ್ನ ʻಕೈಲಾಸ ದೇಶʼಕ್ಕೆ ನೂತನ ಪ್ರಧಾನಿಯಾಗಿ ಮಾಜಿ ನಟಿ ರಂಜಿತಾ ಅವ್ರನ್ನ ನೇಮಿಸಿದ್ದಾರೆ. ನಿತ್ಯಾನಂದರಿಗೆ ಸೇರಿದ ʻನಿತ್ಯಾನಂದಮಯೀ ಸ್ವಾಮಿʼ ಅನ್ನೋ ವೆಬ್ಸೈಟ್ನಲ್ಲಿ ರಂಜಿತಾ ಅವ್ರ ಫೋಟೋ ಒಂದನ್ನ ಪೋಸ್ಟ್ ಮಾಡಿದ್ದು, ಅದರ ಕೆಳಗೆ ಕೈಲಾಸದ ಪ್ರಧಾನಿ ಅಂತ ಬರೆಯಲಾಗಿದೆ ಎನ್ನಲಾಗಿದೆ. ಅಂದಹಾಗೆ ಇತ್ತೀಚೆಗೆ ವಿಶ್ವಸಂಸ್ಥೆ ಕಾರ್ಯಕ್ರಮವೊಂದ್ರಲ್ಲಿ ಕೈಲಾಸದ ಮಹಿಳಾ ರಾಯಭಾರಿಯೊಬ್ರು ಭಾಗವಹಿಸಿದ್ದರು. ಇದೀಗ ಸ್ವಯಂ ಘೋಷಿತ ಕೈಲಾಸ ದೇಶದ ಪ್ರಧಾನಿ ರಂಜಿತಾ ಅವ್ರು ಶೀಘ್ರದಲ್ಲೇ ವಿಶ್ವಸಂಸ್ಥೆಯಲ್ಲಿ ಕೈಲಾಸವನ್ನ ಪ್ರತಿನಿಧಿಸಲಿದ್ದಾರೆ ಅಂತ ಹೇಳಲಾಗ್ತಿದೆ.
-masthmagaa.com
Contact Us for Advertisement