ಭಾರತದ ಬಳಿ ಕ್ಷಮೆ ಕೇಳಿದೆ ರಷ್ಯಾ ವಿದೇಶಾಂಗ ಸಚಿವ! ಕಾರಣವೇನು?

masthmagaa.com:

ದೆಹಲಿಯಲ್ಲಿ ನಡೆದ ಜಿ20 ದೇಶಗಳ ವಿದೇಶಾಂಗ ಸಚಿವರ ಸಭೆಯಲ್ಲಿ ಭಾಗವಹಿಸಿದ ರಷ್ಯಾ ವಿದೇಶಾಂಗ ಸಚಿವ ಸೆರ್ಗೆ ಲಾವ್ರೋವ್‌ ಅವ್ರು ಭಾರತದ ಬಳಿ ಕ್ಷಮೆ ಕೇಳಿದ್ದಾರೆ. ಈ ಸಭೆಯಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳ ಪ್ರತಿನಿಧಿಗಳು ಅಸಭ್ಯ ವರ್ತನೆಯ ಪರವಾಗಿ ನಾನು ಸಭೆ ಆಯೋಜನೆ ಮಾಡಿರುವ ಭಾರತದ ಹತ್ರ ಕ್ಷಮೆ ಕೇಳೋಕೆ ಬಯಸುತ್ತೇನೆ ಅಂತ ಲಾವ್ರೋವ್‌ ಅಮೆರಿಕ ಮತ್ತು ಮಿತ್ರ ರಾಷ್ಟ್ರಗಳಿಗೆ ಪರೋಕ್ಷವಾಗಿ ಟಾಂಗ್‌ ಕೊಟ್ಟಿದ್ದಾರೆ. ಜಿ20 ಸಭೆಯ ಉದ್ಧೇಶವನ್ನ ಮರೆತು ರಷ್ಯಾದ ವಿರುದ್ದ ಮಾತನಾಡ್ತಾ ಪಾಶ್ಚಿಮಾತ್ಯ ದೇಶಗಳು ಸಭೆಯನ್ನ ದುರುಪಯೋಗ ಮಾಡಿಕೊಂಡಿವೆ ಅಂತೇಳಿ ಲಾವ್ರೋವ್‌ ಸಾರಿ ಕೇಳಿದ್ದಾರೆ.

-masthmagaa.com

Contact Us for Advertisement

Leave a Reply