masthmagaa.com:
ಉತ್ತರ ಪ್ರದೇಶದ ಜನ್ರಲ್ಲಿ ಭಯ ಹುಟ್ಟುಹಾಕಿದ್ದ ಗ್ಯಾಂಗ್ಸ್ಟರ್ಗಳ ಪ್ಯಾಂಟ್ ಒದ್ದೆಯಾಗ್ತಿದೆ ಅಂತ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಕೊಲೆ, ಸುಲಿಗೆ ಮತ್ತು ಅಪಹರಣದಂತ ಕೃತ್ಯಗಳಿಂದ ಜನರಿಗೆ ಬೆದರಿಕೆ ಹಾಕ್ತಿದ್ದವ್ರೆಲ್ಲ ತಮ್ಮ ಜೀವ ಉಳಿಸಿಕೊಳ್ಳಲು ಓಡ್ತಿರೋದನ್ನ ಜನ ನೋಡ್ತಿದ್ದಾರೆ. ಕೋರ್ಟ್ಗಳಲ್ಲಿ ಮಾಫಿಯಾ ಗ್ಯಾಂಗ್ಸ್ಟರ್ಗಳಿಗೆ ಶಿಕ್ಷೆಯಾಗುತ್ತಿರೋದಕ್ಕೆ ಅವ್ರ ಪ್ಯಾಂಟ್ಗಳು ಒದ್ದೆಯಾಗ್ತಿವೆ. ಈಗ ಉತ್ತರ ಪ್ರದೇಶದಲ್ಲಿ ಅಕ್ರಮ ಚಟುವಟಿಕೆಗಳಿಗೆ ಹಾಗೂ ಸಮಾಜ ವಿರೋಧಿಗಳಿಗೆ ಯಾವುದೇ ಜಾಗವಿಲ್ಲ ಅಂತ ಯೋಗಿ ಹೇಳಿದ್ದಾರೆ.
-masthmagaa.com
Contact Us for Advertisement