masthmagaa.com:
ಮಹಾರಾಷ್ಟ್ರದ ಶಿವಸೇನೆಯ ಶಿಂಧೆ ಬಣ ಹಾಗೂ ಬಿಜೆಪಿ ನಾಯಕರ ನಡುವೆ ಭಾರೀ ಸಂಘರ್ಷ ಉಂಟಾಗಿ ಗುಂಡು ಹಾರಿಸೋ ಲೆವೆಲ್ಗೆ ಪರಿಸ್ತಿತಿ ತಲುಪಿದೆ. ಶಿವಸೇನೆ(ಶಿಂಧೆ ಬಣ)ದ ಮಹೇಶ್ ಗಾಯಕ್ವಾಡ್ ಮೇಲೆ ಗುಂಡಿನ ದಾಳಿ ನಡೆಸಿದ ಆರೋಪದಲ್ಲಿ ಬಿಜೆಪಿ ಶಾಸಕ ಗಣಪತಿ ಗಾಯಕ್ವಾಡ್ರನ್ನ ಅರೆಸ್ಟ್ ಮಾಡಲಾಗಿದೆ. ಶುಕ್ರವಾರ ರಾತ್ರಿ ಈ ಘಟನೆ ನಡೆದಿತ್ತು. ಈ ಬೆನ್ನಲ್ಲೇ ಕೊಲೆ ಪ್ರಯತ್ನ ಅಥ್ವಾ ಸೆಕ್ಷನ್ 307ರ ಅಡಿಯಲ್ಲಿ ಥಾಣೆ ಪೊಲೀಸ್ ಸ್ಟೇಷನ್ನಲ್ಲಿ ಕೇಸ್ ದಾಖಲಿಸಲಾಗಿದೆ. ಅಲ್ಲದೆ ಅಧಿಕಾರದಲ್ಲಿರೋ ಪಕ್ಷಗಳ ನಾಯಕ ಮಧ್ಯೆ ಈ ಗುಂಡಿನ ಕಾಳಗ ನಡಿದಿರೋದು ಹಲವು ಅನುಮಾನಕ್ಕೆ ಎಡೆ ಮಾಡಿ ಕೊಟ್ಟಿದೆ.
-masthmagaa.com
Contact Us for Advertisement