ಎಂ ಎಂ ಕಲಬುರ್ಗಿ, ಗೌರಿ ಲಂಕೇಶ್‌ ಹತ್ಯೆ ಕೇಸ್‌ಗೆ ಸ್ಪೆಷಲ್‌ ಕೋರ್ಟ್‌ ರಚನೆಗೆ ಸಿಎಂ ಸೂಚನೆ!

masthmagaa.com:

ಎಂ ಎಂ ಕಲಬುರ್ಗಿ ಮತ್ತು ಗೌರಿ ಲಂಕೇಶ್‌ ಅವ್ರ ಹತ್ಯೆ ಕೇಸ್‌ಗೆ ಸಂಬಂಧಿಸಿ ಸಪರೇಟ್‌ ವಿಶೇಷ ನ್ಯಾಯಾಲಯ ರಚನೆ ಜೊತೆಗೆ ಪೂರ್ಣಾವಧಿ ನ್ಯಾಯಾಧೀಶರನ್ನ ನೇಮಿಸ್ಬೇಕು ಅಂತ ಸಿಎಂ ಸಿದ್ಧರಾಮಯ್ಯ ಸೂಚನೆ ನೀಡಿದ್ದಾರೆ. ಈ ವಿಷಯದ ಕುರಿತು ಹೆಚ್ಚುವರಿ ಮುಖ್ಯಕಾರ್ಯದರ್ಶಿಗೆ ಸೂಚಿಸಲಾಗಿದೆ. ಅಂದ್ಹಾಗೆ ಪತ್ರಕರ್ತೆ ಗೌರಿ ಲಂಕೇಶ್‌ ಹಾಗೂ ಎಂ. ಎಂ. ಕಲಬುರ್ಗಿ ಅವ್ರನ್ನ ಗುಂಡಿಕ್ಕಿ ಕೊಲೆ ಮಾಡಲಾಗಿತ್ತು. ಈ ಕೇಸ್‌ಗೆ ಸಂಬಂಧಿಸಿ ಆರೋಪಿಗಳನ್ನ ಪೊಲೀಸರು ಬಂಧಿಸಿದ್ರು ಕೂಡ, ಇವರಿಬ್ರ ಕೊಲೆ ಮಾಡೋಕೆ ಯಾರು ಸುಪಾರಿ ಕೊಟ್ರು? ಇವ್ರನ್ನ ಯಾವ ಕಾರಣಕ್ಕಾಗಿ ಕೊಲೆ ಮಾಡಲಾಗಿದೆ ಅನ್ನೋ ನಿಜಾಂಶ ಮಾತ್ರ ತಿಳಿದುಬಂದಿರ್ಲಿಲ್ಲ. ಈ ವಿಚಾರವಾಗಿ ಹಲವು ವರ್ಷಗಳಿಂದ ವಿಚಾರಣೆ ನಡೀತ ಇದ್ರು ಕೂಡ, ವಿಚಾರಣೆ ಕ್ರಿಯೆ ಬಹಳ ನಿಧಾನವಾಗಿ ಸಾಗ್ತಿದೆ ಅನ್ನೋ ಆರೋಪ ಇತ್ತು. ಆದ್ರಿಂದ ಈ ಎರಡೂ ಕೇಸ್‌ಗಳ ಕುರಿತು ವಿಚಾರಣೆ ಬಹಳ ಸ್ಪೀಡಾಗಿ ನಡೀಬೇಕು ಅನ್ನೋ ಕಾರಣಕ್ಕೆ ಸ್ಪೆಷಲ್‌ ಕೋರ್ಟ್‌ ರಚಿಸೋಕೆ ಸಿದ್ಧರಾಮಯ್ಯ ಸೂಚನೆ ನೀಡಿದ್ದಾರೆ.

-masthmagaa.com

Contact Us for Advertisement

Leave a Reply