ಮಂಡ್ಯದಲ್ಲಿ ʻಗೋ ಬ್ಯಾಕ್‌ ರಮ್ಯಾʼ ಅಭಿಯಾನ! ಯಾಕೆ?

masthmagaa.com:

ಸ್ಯಾಂಡಲ್‌ವುಡ್‌ ನಟಿ, ಮಾಜಿ ಸಂಸದೆ ರಮ್ಯಾ ರಾಜಕೀಯದಲ್ಲಿ ಮತ್ತೆ ಆಕ್ಷೀವ್‌ ಆಗಿದ್ದಾರೆ. ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪರ ಪ್ರಚಾರ ಮಾಡೋಕೆ ಮುಂದಾಗಿದ್ದಾರೆ. ರಮ್ಯಾ ಮಂಡ್ಯಕ್ಕೆ ಎಂಟ್ರಿ ಕೊಡ್ತೀನಿ ಅಂತ ಹೇಳಿದ ಬೆನ್ನಲ್ಲೇ ಅಂಬರೀಶ್ ಅಭಿಮಾನಿಗಳು ಕೆಂಡಾ ಮಂಡಲರಾಗಿದ್ದಾರೆ. ಮಂಡ್ಯದಲ್ಲಿ ಗೋ ಬ್ಯಾಕ್‌ ರಮ್ಯಾ ಅಭಿಯಾನ ನಡೆಸಿದ್ದಾರೆ. ರೆಬೆಲ್ ಸ್ಟಾರ್ ಅಂಬರೀಶ್ ತೀರಿ ಹೋದಾಗ ಮುಖವನ್ನ ಸಹ ನೋಡಲು ಬಾರದ ರಮ್ಯಾ ಈಗ ಬರೋದು ಯಾಕೆ? ರಮ್ಯಾರಿಗೆ ಕಿಂಚಿತ್ತು ನಿಯತ್ತಿಲ್ಲ. ಮಂಡ್ಯಕ್ಕೆ ರಮ್ಯಾರ ಕೊಡುಗೆ ಶೂನ್ಯ. ಅಂತ ಅಂಬರೀಶ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಬೇಲೂರು ಸೋಮಶೇಖರ್ ವಾಗ್ದಾಳಿ ನಡೆಸಿದ್ದಾರೆ.

-masthmagaa.com

Contact Us for Advertisement

Leave a Reply