ರಾಷ್ಟ್ರಪತಿ ಆಡಳಿತ ಹಾಕಿಸ್ತೀನಿ: ಪಂಜಾಬ್‌ ರಾಜ್ಯಪಾಲ ರೊಚ್ಚಿಗೆದ್ದಿದ್ಯಾಕೆ?

masthmagaa.com:

ಪಂಜಾಬ್‌ನಲ್ಲಿರುವ ಆಪ್‌ ಸರ್ಕಾರ ಹಾಗೂ ಅಲ್ಲಿನ ರಾಜ್ಯಪಾಲರ ನಡುವಿನ ಬಿಕ್ಕಟ್ಟು ತೀವ್ರಗೊಂಡಿದೆ. ರಾಜ್ಯಪಾಲರ ಅಧಿಕೃತ ಪತ್ರಗಳಿಗೆ ಸಿಎಂ ಭಗವಂತ್‌ ಮಾನ್‌ ಅವ್ರ ಸರ್ಕಾರ ಉತ್ತರಿಸದೇ ಇದ್ದರೆ ರಾಷ್ಟ್ರಪತಿ ಆಡಳಿತ ಹೇರಬೇಕಾಗುತ್ತೆ ಅಂತ ಅಲ್ಲಿನ ಗವರ್ನರ್‌ ಬನ್ವಾರಿಲಾಲ್‌ ಪುರೋಹಿತ್‌ ಎಚ್ಚರಿಸಿದ್ದಾರೆ. ಇತ್ತೀಚೆಗೆ ಪಂಜಾಬ್‌ನಲ್ಲಿ ಹೆಚ್ಚಾಗುತ್ತಿರುವ ನಶಾ ವಸ್ತುಗಳ ಕಳ್ಳಸಾಗಣೆ ಕುರಿತು ವರದಿ ನೀಡುವಂತೆ ರಾಜ್ಯಪಾಲರು ಪತ್ರ ಬರೆದಿದ್ದಾರೆ. ಜೊತೆಗೆ ನಶಾ ವಸ್ತುಗಳ ಕಳ್ಳಸಾಗಣೆ ನಿಯಂತ್ರಣಕ್ಕೆ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಣೆ ನೀಡುವಂತೆ ಕೇಳಿದ್ದಾರೆ. ಆದ್ರೆ ಈ ಪತ್ರಗಳಿಗೆ ಯಾವುದೇ ಉತ್ತರ ಬರದ ಕಾರಣ ರಾಜ್ಯಪಾಲರು ಅಸಮಾಧಾನಗೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಮಾನ್‌, ನಶಾ ವಸ್ತು ಕಳ್ಳ ಸಾಗಣೆ ಕುರಿತ ತಮ್ಮ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ವಿವರಿಸಿದ್ದಾರೆ.

-masthmagaa.com

Contact Us for Advertisement

Leave a Reply