masthmagaa.com:
ಗುಜರಾತಿನಲ್ಲಿ AIMIM ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಪ್ರಯಾಣಿಸುತ್ತಿದ್ದ ವಂದೆ ಭಾರತ್ ಎಕ್ಸ್ ಪ್ರೆಸ್ ಮೇಲೆ ಕೆಲ ಅಪರಿಚಿತ ವ್ಯಕ್ತಿಗಳು ಕಲ್ಲು ತೂರಾಟ ನಡೆಸಿರುವ ಘಟನೆ ನಡೆದಿದೆ. ಘಟನೆ ಸಂಬಂಧ AIMIMನ ವಕ್ತಾರ ವಾರಿಸ್ ಪಠಾಣ್ ಟ್ವೀಟ್ ಮಾಡಿದ್ದಾರೆ. ಅದ್ರಲ್ಲಿ ರೈಲಿನ ಕಂಪಾರ್ಟ್ಮೆಂಟ್ನ ಕಿಟಕಿ ಗಾಜು ಒಡೆದು ಹೋಗಿರೊ ಫೋಟೊವನ್ನ ಶೇರ್ ಮಾಡಿದ್ದಾರೆ. ಓವೈಸಿ, ಗುಜರಾತಿನ AIMIM ಪಕ್ಷದ ಅಧ್ಯಕ್ಷ ಸಬೀರ್ ಕಬ್ಲಿವಾಲಾ ಮತ್ತಿತರ ಪಕ್ಷದ ಮುಖಂಡರು ಅಹಮದಾಬಾದ್ನಿಂದ ಸೂರತ್ಗೆ ವಂದೇ ಭಾರತ್ ಎಕ್ಸ್ ಪ್ರೆಸ್ನಲ್ಲಿ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.
-masthmagaa.com
Contact Us for Advertisement