ಹರ್ಯಾಣದಲ್ಲಿ ಪೊಲಿಟಿಕಲ್‌ ಹೈಡ್ರಾಮಾ: ವಿಶ್ವಾಸಮತಯಾಚನೆಗೆ ಆಗ್ರಹ!

masthmagaa.com:

ಕುಸ್ತಿಪಟುಗಳ ನಾಡು ಹರ್ಯಾಣ ರಾಜಕೀಯದಲ್ಲಿ ದಿನಕ್ಕೊಂದು ಬೆಳವಣಿಗೆಗಳಾಗ್ತಿವೆ. ಮೂರು ಜನ ಪಕ್ಷೇತರರು ಬಿಜೆಪಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನ ವಾಪಾಸ್‌ ತಗೊಂಡ ಬೆನ್ನಲ್ಲೇ ದೊಡ್ಡ ಪಾಲಿಟಿಕಲ್‌ ಹೈಡ್ರಾಮಾ ಶುರುವಾಗಿದೆ. ಅತ್ತ ಹರ್ಯಾಣ ಮಾಜಿ ಸಿಎಂ ಮನೋಹರ್‌ ಲಾಲ್‌ ಖಟ್ಟರ್‌ ಬೇರೆ ಶಾಸಕರು ನಮ್ಮ ಜೊತೆ ಸಂಪರ್ಕದಲ್ಲಿದ್ದಾರೆ ಅಂತೇಳಿದ್ರು. ಆದ್ರೆ ಈಗ JJP ನಾಯಕ, ಮಾಜಿ ಡಿಸಿಎಂ ದುಷ್ಯಂತ ಚೌಟಾಲಾ ಹರ್ಯಾಣ ಸರ್ಕಾರಕ್ಕೆ ವಿಶ್ವಾಸಮತ ಯಾಚಿಸಲು ನಿರ್ದೇಶನ ನೀಡಿ ಅಂತೇಳಿ ಅಲ್ಲಿನ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಅಲ್ದೇ ಹರ್ಯಾಣದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಿ ಅಂತ ಒತ್ತಾಯಿಸಿದ್ದಾರೆ.

-masthmagaa.com

Contact Us for Advertisement

Leave a Reply