ಬ್ಲ್ಯಾಕ್‌ಮೇಲ್‌ ಎಲ್ಲಾ ನನತ್ರ ನಡೆಯೋದಿಲ್ಲ!‌ ಟಿಕೆಟ್‌ ಕೊಡಿ ಎಂದ ಭವಾನಿ ರೇವಣ್ಣಗೆ ಕುಮಾರಸ್ವಾಮಿ ಟಾಂಗ್!

masthmagaa.com:

ಮುಂಬರುವ ವಿಧಾನಸಭಾ ಚುನಾವಣೆಗೆ ಹಾಸನ ಕ್ಷೇತ್ರದಲ್ಲಿ ಯಾರು ಸ್ಪರ್ಧೆ ಮಾಡಬೇಕು ಅನ್ನೋದಕ್ಕೆ ಸಂಬಂಧಪಟ್ಟಂತೆ ಜೆಡಿಎಸ್‌ನಲ್ಲಿ ನಡೀತಿರೋ ಒಳಜಗಳ ಸಧ್ಯಕ್ಕೆ ತಣ್ಣಾಗಾಗೋ ಲಕ್ಷಣ ಕಾಣಿಸ್ತಿಲ್ಲ. ಇದೀಗ ಕಾರ್ಯಕರ್ತನಿಗೆ ಟಿಕೆಟ್ ನೀಡುವ ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಅಂತ ಕುಮಾರಸ್ವಾಮಿ ಹೇಳಿದ್ದಾರೆ. ಜೊತೆಗೆ ಪಕ್ಷೇತರವಾಗಿ ಸ್ಪರ್ಧಿಸುತ್ತೇನೆ ಅಂತ ದೇವೇಗೌಡರಿಗೆ ಎಮೋಷನಲ್​ ಬ್ಲ್ಯಾಕ್​ಮೇಲ್​ ಮಾಡಬಹುದು. ಆದರೆ ಇದೆಲ್ಲ​​ ನನ್ನ ಹತ್ತಿರ ನಡೆಯುವುದಿಲ್ಲ ಅಂತ ಭವಾನಿ ರೇವಣ್ಣಗೆ ಟಾಂಗ್​ ಕೊಟ್ಟಿದ್ದಾರೆ. ಇತ್ತ ಭವಾನಿ ರೇವಣ್ಣ ಅವರಿಗೆ ಟಿಕೆಟ್‌ ಕೊಡಲಿಲ್ಲ ಅಂದ್ರೆ ತಾನೂ ಎಲೆಕ್ಷನ್‌ಗೆ ನಿಲ್ಲೋದಿಲ್ಲ ಅಂತ ರೇವಣ್ಣ ಹೇಳಿದ್ದಾರೆ ಅಂತ ಸುದ್ದಿಯಾಗಿದೆ. ಇನ್ನೊಂದ್ಕಡೆ ಜೆಡಿಎಸ್‌ ಪಕ್ಷಕ್ಕೆ ರಾಜೀನಾಮೆ ಕೊಟ್ಟಿದ್ದ ಶಿವಲಿಂಗೇಗೌಡ ಇವತ್ತು ಅಧಿಕೃತವಾಗಿ ಕಾಂಗ್ರೆಸ್‌ ಸೇರ್ಪಡೆಯಾಗಿದ್ದಾರೆ. ಈ ವೇಳೆ ಮಾತನಾಡಿದ ಡಿಕೆ ಶಿವಕುಮಾರ್‌, ಅರಸೀಕೆರೆಯಲ್ಲಿ ಬೆಳಕು ಹಚ್ಚೋಕೆ ಬಂದಿದ್ದೀವಿ. ಪ್ರತಿಮನೆಗೆ 200 ಯುನಿಟ್‌ ಉಚಿತ, ಮಹಿಳೆಯರಿಗೆ 2000ರೂ ಖಚಿತ, ಯುವಕರಿಗೆ 3000 ರೂ ನಿಶ್ಚಿತ ಅಂತ ಕಾವ್ಯಾತ್ಮಕವಾಗಿ ಹೇಳಿದ್ದಾರೆ. ಇನ್ನು ಕರ್ನಾಟಕ ಎಲೆಕ್ಷನ್‌ ಕುರಿತಂತ ಮಾತನಾಡಿರೋ ಕಾಂಗ್ರೆಸ್‌ ಸಂಸದ ಶಶಿತರೂರ್‌, ಕರ್ನಾಟಕಕ್ಕೆ 100 ಪರ್ಸೆಂಟ್‌ ಕಮ್ಮಿಟ್‌ಮೆಂಟ್‌ ಬೇಕು. 40 ಪರ್ಸೆಂಟ್‌ ಸರ್ಕಾರ ಅಲ್ಲ ಅಂತ ಕುಟುಕಿದ್ದಾರೆ. ಇದೆಲ್ಲದ್ರ ಮಧ್ಯೆ, ಜೆಡಿಎಸ್‌ ತೊರೆದು ಕಾಂಗ್ರೆಸ್‌ಗೆ ಬಂದು, ಕಡೂರು ಟಿಕೆಟ್‌ ಆಕಾಂಕ್ಷಿಯಾಗಿದ್ದ ಜೆ ವೈಎಸ್‌ವಿ ದತ್ತಾ ಸ್ವತಂತ್ರವಾಗಿ ಸ್ಪರ್ಧೆ ಮಾಡೋದಾಗಿ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply