masthmagaa.com:
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಕಪ್ಪು ಹಣವನ್ನ ಸಕ್ರಮಗೊಳಿಸೋಕೆ ಅವ್ರ ಆಪ್ತರಾದ ಸುನೀಲ್ ಕುಮಾರ್ ಶರ್ಮ ಮತ್ತು ಇತರರು ʻಹವಾಲಾʼ ವಹಿವಾಟು ನಡೆಸುತ್ತಿದ್ರು ಅಂತ ʻಇಡಿʼ ಹೇಳಿದೆ. ಶಿವಕುಮಾರ್ ಮತ್ತು ಅವ್ರ ಕೆಲವು ಆಪ್ತರ ವಿರುದ್ದ ವಿಚಾರಣೆ ಆರಂಭಿಸುವಂತೆ ಕೋರಿ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ ಹವಾಲಾ ವಹಿವಾಟಿನ ಆರೋಪ ಮಾಡಲಾಗಿದೆ. ಇನ್ನು ಈ ವರದಿಯನ್ನ ಮಾನ್ಯ ಮಾಡಿರುವ ನ್ಯಾಯಾಲಯ ಜುಲೈ 1 ರಿಂದ ವಿಚಾರಣೆಗೆ ಹಾಜರಾಗುವಂತೆ ಎಲ್ಲ ಆರೋಪಿಗಳಿಗೂ ಸಮನ್ಸ್ ಜಾರಿಗೆ ಅದೇಶಿಸಿದೆ.
-masthmagaa.com
Contact Us for Advertisement