ಬೆಂಗಳೂರಿನಲ್ಲಿ ಭಾರೀ ಮಳೆ! ಧರೆಗುಳಿದ ಮರಗಳು, ಟ್ರಾಫಿಕ್‌ ಸಮಸ್ಯೆ!

masthmagaa.com:

ರಾಜ್ಯದ ಹಲವು ಕಡೆ ಮಳೆಯಾಗಿದೆ. ಬೆಂಗಳೂರು ಚಿಕ್ಕಮಗಳೂರು ಸೇರಿ ಅನೇಕ ಕಡೆ ಮೇ 6 ಮತ್ತು 7ನೇ ತಾರೀಖು ಮಳೆ ಬಂದಿದ್ದು ಅಲ್ಲಲ್ಲಿ ಮರಗಳು ಧರೆಗೆ ಉರುಳಿ ಬಿದ್ದಿವೆ, ಕೆಲವು ಕಡೆ ರಸ್ತೆ-ಮಾರ್ಗಗಳೂ ಜಲಾವೃತಗೊಂಡಿದ್ವು ಟ್ರಾಫಿಕ್‌ ಸಮಸ್ಯೆ ಕೂಡ ಕಂಡುಬಂದಿದೆ. ಅಷ್ಟೇ ಅಲ್ಲ ಇನ್ನೂ 7 ದಿನ ರಾಜ್ಯದ ಹಲವು ಕಡೆ ಮಳೆಯಾಗಲಿದೆ ಅಂತ ಹಮಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮೇ 07, 2024 ರಿಂದ ಮೇ 14 ರವರೆಗೆ ದಕ್ಷಿಣ ಒಳನಾಡು, ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಸಾಧಾರಣ ಮಳೆ, ಮತ್ತು ಮೇ 10 ರಿಂದ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಕಡಿಮೆ ಮಳೆಯಾಗುವ ಸಾಧ್ಯತೆ ಇದೆ ಅಂತ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ ಮುನ್ಸೂಚನೆ ಕೊಟ್ಟಿದೆ. ಅತ್ತ ಮುಂದಿನ 24 ಗಂಟೆಗಳ ಕಾಲ, ಕರ್ನಾಟಕ ಬಹುತೇಕ ಕಡೆಗಳಿಗೆ ಭಾರತೀಯ ಹಮಾಮಾನ ಇಲಾಖೆ ಎಲ್ಲೋ ಅಲರ್ಟ್‌ ಘೋಷಣೆ ಮಾಡಿದೆ.

-masthmagaa.com

Contact Us for Advertisement

Leave a Reply