masthmagaa.com:
ಪ್ರಧಾನಿ ನರೇಂದ್ರ ಮೋದಿಯವರು ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಕುರಿತು ಹೇಳಿಕ ಕೊಟ್ಟ ಬಳಿಕ ಈ ಬಗ್ಗೆ ಚರ್ಚೆಗಳು ಹೆಚ್ಚಾಗುತ್ತಿವೆ. ಕೆಲವು ವಿರೋಧ ಪಕ್ಷಗಳು UCCಗೆ ಸಪೋರ್ಟ್ ಮಾಡೋದಾಗಿ ಹೇಳಿವೆ. ಕಾಂಗ್ರೆಸ್ ಮಾತ್ರ UCC ಅನ್ನ ಸ್ಟ್ರಾಂಗ್ ಆಗಿ ಅಪೋಸ್ ಮಾಡ್ತಿದೆ. ಆದ್ರೆ ಹಿಮಾಚಲ ಪ್ರದೇಶ ಕಾಂಗ್ರೆಸ್ ಸಚಿವ ವಿಕ್ರಮಾದಿತ್ಯ ಸಿಂಗ್ ಅವ್ರು UCC ಸಪೋರ್ಟ್ ಮಾಡೋದಾಗಿ ಹೇಳಿದ್ದಾರೆ. ನಾನು ನನ್ನ ಅಂತರಂಗದ ಮಾತನ್ನ ಕೇಳಿ ಏಕರೂಪ ನಾಗರಿಕ ಸಂಹಿತೆಗೆ ಬೆಂಬಲ ನೀಡ್ತಿದ್ದೇನೆ ಅಂತ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರೋ ಹಿಮಾಚಲ ಪ್ರದೇಶದ ಮಾಜಿ ಸಿಎಂ ಹಾಗೂ ಬಿಜೆಪಿ ನಾಯಕ ಜೈರಾಮ್ ಠಾಕೂರ್ ಅವ್ರು ಸಿಂಗ್ ಅವ್ರ ಬೆಂಬಲವನ್ನ ಸ್ವಾಗತಿಸಿದ್ದಾರೆ. ಇನ್ನೊಂದ್ ಕಡೆ UCC ಕುರಿತು ಹೇಳಿಕೆ ನೀಡಿರೋ BSP ಮುಖ್ಯಸ್ಥೆ ಮಾಯಾವತಿ ಅವ್ರು, ನಮ್ಮ ಪಕ್ಷ UCC ಅನ್ನ ವಿರೋಧ ಮಾಡ್ತಿಲ್ಲ. ಆದ್ರೆ ಬಿಜೆಪಿ ಸರ್ಕಾರ ಅದನ್ನ ಜಾರಿಗೆ ತರೋಕೆ ಪ್ರಯತ್ನಿಸೋ ವಿಧಾನವನ್ನ ನಾವು ಒಪ್ಪೋದಿಲ್ಲ ಅಂತ ಹೇಳಿದ್ದಾರೆ. ಇದೇ ವೇಳೆ ಎಲ್ಲಾ ನಾಗರಿಕರಿಗೂ UCC ಬಗ್ಗೆ ರಕ್ಷಣೆ ಕೊಡೊ ಕುರಿತು ಸಂವಿಧಾನದಲ್ಲಿ ಇದೆ. ಆದ್ರೆ ಅದನ್ನ ಹೇರಲೇಬೇಕು ಅಂತೇನಿಲ್ಲ ಅಂತ ತಿಳಿಸಿದ್ದಾರೆ.
-masthmagaa.com
Contact Us for Advertisement