ಬಾಂಗ್ಲಾ ಮೂಲದ ವಲಸಿಗರಿಗೆ ಬಿಸ್ವ ಷರತ್ತು: ಮದರಸಾ ಬಿಡಿ ಶಿಕ್ಷಣ ನೀಡಿ!

masthmagaa.com:

ಅಸ್ಸಾಂಗೆ ವಲಸೆ ಬಂದಿರೋ ಬಾಂಗ್ಲಾ ಮೂಲದ ವಲಸಿಗರಿಗೆ ಅಸ್ಸಾಂ ಸಿಎಂ ಹೇಮಂತ ಬಿಸ್ವ ಸರ್ಮಾ ಕೆಲ ಷರತ್ತುಗಳನ್ನ ವಿಧಿಸಿದ್ದಾರೆ. ಪ್ರಮುಖವಾಗಿ ಬಾಂಗ್ಲಾ ಮೂಲದ ಬಂಗಾಳಿ ಮಾತಾಡೊ, ʻಮಿಯಾʼ ಅಂತ ಕರೆಸಿಕೊ‍‍ಳ್ಳೊ ಮುಸ್ಲಿಮರಿಗೆ ಬಿಸ್ವ ಕಂಡೀಷನ್‌ಗಳನ್ನ ಹಾಕಿದ್ದಾರೆ. ʻಅವ್ರೆಲ್ಲ‌ ತಮ್ಮನ್ನ ತಾವು ಅಸ್ಸಾಂನ ಸ್ಥಳೀಯ ಜನ ಅಂತ ಗುರುತಿಸಿಕೊಳ್ಳಬೇಕಾದ್ರೆ, ನಮ್ಮ ಅಸ್ಸಾಮಿ ಸಂಸ್ಕೃತಿ ಪ್ರಕಾರ ಎರಡಕ್ಕಿಂತ ಹೆಚ್ಚು ಮಕ್ಕಳಿಗೆ ಜನ್ಮ ನೀಡೋದನ್ನ ನಿಲ್ಲಿಸಬೇಕು. ಅವ್ರು ಅಪ್ರಾಪ್ತ ಹೆ‍ಣ್ಣು ಮಕ್ಕಳನ್ನ ಮದುವೆ ಆಗ್ಬಾರ್ದು. ಇದಲ್ಲದೆ ಅವ್ರು ತಮ್ಮ ಮಕ್ಕಳನ್ನ ಮದರಸಾಗಳಿಗೆ ಕಳ್ಸೋದನ್ನ ಬಿಟ್ಟು, ಶಾಲಾ-ಕಾಲೇಜುಗಳಿಗೆ ಕಳ್ಸಿ ವಿದ್ಯಾವಂತರನ್ನಾಗಿಸಿ, ಇಂಜಿನಿಯರ್,‌ ಡಾಕ್ಟರ್‌ಗಳಾಗಿ ಮಾಡ್ಬೇಕುʼ ಅಂತ ಕರೆ ನೀಡಿದ್ದಾರೆ. ʻಈ ಷರತ್ತುಗಳನ್ನ ಪಾಲಿಸಿದ್ರೆ ಅವ್ರು ಕೂಡ ಅಸ್ಸಾಮ್‌ ಜನರಂತೆ ಸ್ಥಳೀಯರಾಗ್ಬಹುದುʼ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply