masthmagaa.com:
ಸುಳ್ಳು ದಾಖಲೆಗಳನ್ನು ತೋರಿಸಿ ಪ್ರಧಾನಿ ಮೋದಿ ವಿರುದ್ಧ ಟ್ವೀಟ್ ಮಾಡಿದ ಪ್ರಕರಣದಲ್ಲಿ ಇತ್ತೀಚಿಗೆ ತಾನೇ ಟಿಎಂಸಿ ನಾಯಕ ಸಾಕೇತ್ ಗೋಖಲೆಯನ್ನ ಬಂಧಿಸಿ, ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಇದೀಗ ಜಾಮೀನು ಪಡೆದ ಕೆಲವೇ ಹೊತ್ತನಲ್ಲೇ ಅವರನ್ನ ಮತ್ತೆ ಅರೆಸ್ಟ್ ಮಾಡಲಾಗಿದೆ. ಮೊರ್ಬಿ ಸೇತುವೆ ದುರಂತದ ಸಮಯದಲ್ಲಿ ಮೋದಿಯವರ ಭೇಟಿ ಸಂಧರ್ಭದಲ್ಲಿ 30 ಕೋಟಿ ಖರ್ಚು ಮಾಡಲಾಗಿದೆ ಅಂತ ಹೇಳಿದ್ರು. ಇದ್ರ ವಿರುದ್ದ ಜಾಮೀನು ಕೂಡ ಪಡೆದಿದ್ದಾರೆ. ಈ ಆರೋಪಕ್ಕೆ ಸಂಬಂಧಿಸಿ ಈಗ ಮತ್ತೆ ಮೊರ್ಬಿ ಪೊಲೀಸರು ಅರೆಸ್ಟ್ ಮಾಡಿದಾರೆ. ಇದ್ರ ಬೆನ್ನಲ್ಲೇ ತಮ್ಮ ನಾಯಕನ ಪರವಾಗಿ ಟಿಎಂಸಿ ಪ್ರತಿಭಟನೆ ನಡೆಸಿದೆ.
-masthmagaa.com
Contact Us for Advertisement