ಹುಬ್ಬಳ್ಳಿ ಗಲಭೆ: ಮೌಲ್ವಿ ವಸೀಂ ಪಠಾಣ್‌ ಪೋಲಿಸರ ವಶಕ್ಕೆ!

masthmagaa.com:

ಇಡೀ ರಾಜ್ಯವನ್ನೇ ತಲ್ಲಣಗೊಳಿಸಿದ ಹುಬ್ಬಳ್ಳಿ ಗಲಭೆ ಪ್ರಕರಣದ ಪ್ರಮುಖ ಆರೋಪಿ ಮೌಲ್ವಿ ವಾಸೀಂ ಪಠಾಣ್‌ನನ್ನ ಇವತ್ತು ಪೋಲಿಸರು ವಶಕ್ಕೆ ಪಡೆದಿದ್ದಾರೆ. ಗಲಭೆಗೆ ಮಾಸ್ಟರ್‌ ಮೈಂಡ್‌ ಅಂತ ಹೇಳಲಾಗ್ತಾ ಇರೋ ಈ ಮೌಲ್ವಿ ಇವತ್ತು ಬೆಳಗ್ಗೆ ಅಜ್ಞಾತ ಸ್ಥಳದಿಂದ 4 ನಿಮಿಷದ ವೀಡಿಯೋ ಒಂದನ್ನ ರಿಲೀಸ್‌ ಮಾಡಿದ್ರು. ಅದ್ರಲ್ಲಿ, ನಾನು ಗಲಭೆಗೆ ಪ್ರಚೋದನೆ ನೀಡಿಲ್ಲ. ನಮ್ಮ ಸಮುದಾಯದವ್ರನ್ನ ಸಮಾಧಾನ ಮಾಡೋಕೆ ಪೋಲಿಸ್ರೆ ನಂಗೆ ಜೀಪ್‌ ಮೇಲೆ ಹತ್ತಿ ಅಂತ ಹೇಳಿದ್ರು. ಗಲಭೆಯ ವಿಡೀಯೋದಲ್ಲೂ ಕೂಡ ನಾನು ಎಲ್ಲಿಯೂ ಕಲ್ಲು ಹೊಡೆಯುವಂತೆ ಪ್ರಚೋದನೆ ಮಾಡಿ ಮಾತಾಡಿಲ್ಲ. ಸದ್ಯದರಲ್ಲಿಯೇ ನಾನು ಪೋಲಿಸ್‌ ಬಳಿ ಶರಣಾಗ್ತೇನೆ ಅಂತ ಹೇಳಿದ್ದಾನೆ. ಆದ್ರೆ ಈ ವಿಡೀಯೋ ಬಿಡುಗಡೆಯಾದ ಮೂರು ಗಂಟೆಗಳಲ್ಲಿಯೇ ಹಳೇ ಹುಬ್ಬಳ್ಳಿ ಪೋಲಿಸರು ಮೌಲ್ವಿ ವಾಸಿಂ ಪಠಾಣ್‌ನನ್ನ ಠಾಣೆಗೆ ಕರೆತಂದಿದ್ದಾರೆ. ಇನ್ನು ವಿಚಾರಣೆ ಬಳಿಕ ಇವ್ರನ್ನ ಬಂಧಿಸೋ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ.
ಇನ್ನೊಂದ್‌ ಕಡೆ ಘಟನೆಯ ಮತ್ತೊಬ್ಬ ಆರೋಪಿ ಎಐಎಂಐಎ ಪಕ್ಷದ ಸ್ಥಳೀಯ ಮುಖಂಡ ಮೊಹಮ್ಮದ್‌ ಆರೀಫ್‌ನನ್ನ ಕೂಡ ಪೋಲಿಸರು ವಶಕ್ಕೆ ಪಡೆದಿದ್ದಾರೆ. ಈತನ ಕೂಡ ಘಟನೆ ನಡೆದ ದಿನದಿಂದ ತಲೆಮರೆಸಿಕೊಂಡಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗು ಸುಮಾರು 126 ಜನರನ್ನ ಬಂಧಿಸಲಾಗಿದೆ ಅಂತ ಪೋಲಿಸರು ಮಾಹಿತಿ ನೀಡಿದ್ದಾರೆ. ಇನ್ನು ಧಾರವಾಡ ಜಿಲ್ಲೆ ಸೌಹಾರ್ದಕ್ಕೆ ಹೆಸರಾಗಿದ್ದು ಮೊದಲಿನಂತೆ ಶಾಂತಿ, ಸಹಬಾಳ್ವೆ ನೆಲಸಬೇಕು. ಹಳೆ ಹುಬ್ಬಳ್ಳಿ ಗಲಭೆ ಮುಂದುವರೆದು ಕೋಮು ದ್ವೇಷ ಹರಡಬಾರ್ದು ಅಂತ ಹುಬ್ಬಳ್ಳಿಯ ಹಿಂದೂ ಮತ್ತು ಮುಸ್ಲಿಂ ಸಮಾಜಗಳ ಧಾರ್ಮಿಕ ಮುಖಂಡರು ಮನವಿ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply