masthmagaa.com:
ಪುತ್ರನ ಮನೆಯಲ್ಲಿ ಲೋಕಾಯುಕ್ತರಿಗೆ ಹಣ ಸಿಕ್ಕಿದ್ದೇ ತಡ ಒಂದು ವಾರದಿಂದ ಅದೃಶ್ಯರಾಗಿದ್ದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ ಇಂದು ಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಶಾಸಕರ ಪುತ್ರನ ಮನೆಯಲ್ಲಿ 8 ಕೋಟಿಗೂ ಅಧಿಕ ಅಕ್ರಮ ಹಣ ಸಿಕ್ಕಿದೆ ಅನ್ನೋ ಕೇಸಿಗೆ ಸಂಬಂಧಪಟ್ಟಂತೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಸೇರಿದಂತೆ ಆರು ಮಂದಿ ವಿರುದ್ಧ ಕೇಸು ದಾಖಲಾಗಿತ್ತು. ಶಾಸಕರ ಪರ ವಕೀಲರು ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ರು. ಈಗ ಜಾಮೀನು ನೀಡಲಾಗಿದೆ. ಇದರ ಬೆನ್ನಲ್ಲೇ ಜನರ ಮುಂದೆ ಪ್ರತ್ಯಕ್ಷವಾಗಿರೋ ವಿರೂಪಾಕ್ಷಪ್ಪ ತಮ್ಮ ಬೆಂಬಲಿಗರ ಜೊತೆ ಭರ್ಜರಿಯಾಗಿ ಮೆರವಣಿಗೆ ಮಾಡಿದ್ದಾರೆ. ಕಾರಿನಲ್ಲಿ ಹೋಗ್ತಿದ್ದ ಶಾಸಕರ ಹಿಂದೆ ಅವರ ಬೆಂಗಲಿಗರು ಬಿಜೆಪಿ ಬಾವುಟಗಳನ್ನ ಹಿಡಿದು ಜೈ ಕಾರ ಕೂಗಿ, ಕುಣಿದು ಕುಪ್ಪಳಿಸಿದ್ದಾರೆ. ಈ ವೇಳೆ ಮಾತನಾಡಿದ ಶಾಸಕ ವಿರೂಪಾಕ್ಷಪ್ಪ, ನಮ್ಮ ವಿರುದ್ದ ಷಡ್ಯಂತ್ರ ಮಾಡಿದ್ದಾರೆ. ಲೋಕಾಯುಕ್ತ ವಶಪಡಿಸಿಕೊಂಡಿರೋ ದುಡ್ಡು ಎಲ್ಲಾ ನಮ್ಮದೇ. ನನ್ನ ಮಗ ಸುಮ್ಮನೇ ಕೂತಿದ್ದ. ಆಗ ಲೋಕಾಯುಕ್ತ ಅಧಿಕಾರಿಗಳೇ ಬಂದು ಅವನ ಕೈ ಹಿಡಿದು ಇಂಕ್ ಮತ್ತಿರೋ ದುಡ್ಡಿಗೆ ಕೈ ಅದ್ದಿಸಿದ್ದಾರೆ. ನಾನೊಬ್ಬ ಸರಳ ಸಜ್ಜನ ರಾಜಕಾರಣಿ ಅಂತ ನಮ್ಮ ತಾಲ್ಲೂಕಿನ ಜನರೇ ಹೇಳ್ತಾರೆ. ನಾನು ಯಾವುದೇ ತಪ್ಪು ಮಾಡಿಲ್ಲ. ಈಗ ಸಿಕ್ಕಿರೋ ದುಡ್ಡು ನಮ್ಮ ಕುಟುಂಬದ್ದೇ, ನಮ್ಮ ಚೆನ್ನಗಿರಿ ತಾಲ್ಲೂಕಿನಲ್ಲಿ ಸಾಮಾನ್ಯ ತೋಟ ಇರೋರ ಮನೆಯಲ್ಲೂ 5 ರಿಂದ 6 ಕೋಟಿ ದುಡ್ಡು ಇರುತ್ತೆ. ಅಂತದ್ರಲ್ಲಿ ನನ್ನತ್ರ 120 ಎಕರೆ ಅಡಿಕೆ ತೋಟ ಇದೆ. ಸಿಕ್ಕಿರೋ ಹಣಕ್ಕೆ ಸೂಕ್ತ ದಾಖಲೆ ತೋರಿಸಿ ಲೋಕಾಯುಕ್ತರ ಕೈಯಿಂದ ಹಣ ವಾಪಾಸ್ ಬಿಡಿಸಿಕೊಂಡು ಬರ್ತೀವಿ ಅಂತ ಹೇಳಿದ್ದಾರೆ. ಇನ್ನು ಈ ಕಡೆ ಶಾಸಕರ ಮೆರವಣಿಗೆ ಬಿಜೆಪಿ ನಾಯಕರ ಕಣ್ಣು ಕೆಂಪಾಗಿಸಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮಾಡಾಳ್ ವಿರೂಪಾಕ್ಷಪ್ಪಗೆ ವಾರ್ನ್ ಮಾಡಿದ್ದಾರೆ.
-masthmagaa.com
Contact Us for Advertisement