masthmagaa.com:
ನಿನ್ನೆ ತಾನೇ ಸಿದ್ರಾಮಯ್ಯ ಅವರು, ಬಿಜೆಪಿ ವಿರುದ್ದ ಮಾತನಾಡ್ತಾ ನನ್ನ ಹೆಣ ಕೂಡ ಬಿಜೆಪಿಗೆ ಹೋಗಲ್ಲ ಅಂತ ಹೇಳಿದ್ರು. ಇವತ್ತು ಆ ಕಡೆ ಬಿಹಾರ ಸಿಎಂ ನಿತೀಶ್ ಕುಮಾರ್ ಕೂಡ, ʻನಾನು ಬೇಕಾದ್ರೆ ಸಾಯುತ್ತೇನೆ ಆದರೆ ಮತ್ತೆ ಬಿಜೆಪಿ ಮಾತ್ರ ಸೇರಲ್ಲʼ ಅಂತ ಹೇಳಿದ್ದಾರೆ. ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳೋ ಪ್ರಶ್ನೆಯೆ ಇಲ್ಲ. ಅದ್ರ ಬದ್ಲಾಗಿ ಬೇಕಾದ್ರೆ ನಾನು ಸಾಯತ್ತೇನೆ. ಈ ಹಿಂದೆ ಮೈತ್ರಿ ಸರ್ಕಾರ ಇದ್ದಾಗ ಹಿಂದುತ್ವ ಸಿದ್ಧಾಂತದ ಬಗ್ಗೆನಾನು ಸದಾ ಎಚ್ಚರಿಕೆ ಇಂದ ಇದ್ರೂ ಸಹ ಮುಸ್ಲಿಮರು ಸೇರಿದಂತೆ ಜೆಡಿಯುನ ಎಲ್ಲಾ ಬೆಂಬಲಿಗರ ಮತಗಳನ್ನ ಬಿಜೆಪಿ ಪಡೆಯುತ್ತಿತ್ತು. ಆದ್ರೆ ಮುಂಬರೋ ಲೋಕಸಭಾ ಎಲೆಕ್ಶನ್ನಲ್ಲಿ ಬಿಹಾರದಲ್ಲಿರೋ 40 ಸೀಟ್ಗಳಲ್ಲಿ 36 ಸೀಟ್ಗಳನ್ನ ಗೆಲ್ತೀವಿ ಅಂತ ಬಿಜೆಪಿ ಹೇಳಿಕೊಳ್ಳುತ್ತೆ ಅಂತ ವ್ಯಂಗ್ಯ ಮಾಡಿದ್ದಾರೆ. ಅಂದ್ಹಾಗೆ ನಿತೀಶ್ ನೇತೃತ್ವದ ಜೆಡಿಯು 2017ರಲ್ಲಿ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿತ್ತು. ಕಳೆದ ವರ್ಷ ಮೈತ್ರಿ ಮುರಿದುಕೊಂಡು ಬದ್ದವೈರಿ ಆರ್ಜೆಡಿ ಜೊತೆಗೆ ಸೇರಿ ಸರ್ಕಾರ ರಚಿಸಿದ್ದಾರೆ.
-masthmagaa.com
Contact Us for Advertisement