masthmagaa.com:
ದೆಹಲಿ ಆಡಳಿತಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊರಡಿಸಿರೋ ಸುಗ್ರೀವಾಜ್ಞೆ ವಿರೋಧಿಸಿ, ದೆಹಲಿಯಲ್ಲಿ ನಡೆದ ಆಪ್ನ ಮಹಾ ರ್ಯಾಲಿಯ ವೇಳೆ ಪಂಜಾಬ್ ಸಿಎಂ ಭಗವಂತ್ ಮಾನ್ ಅವ್ರು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಮತ್ತೆ ದೇಶದಲ್ಲಿ ಚುನಾವಣೆಯೇ ಇರೋದಿಲ್ಲ. ನರೇಂದ್ರ ಮೋದಿಯವರು ʻನರೇಂದ್ರ ಪುಟಿನ್ʼ ಆಗ್ತಾರೆ ಅಂತ ಮಾನ್ ವಾಗ್ದಾಳಿ ನಡೆಸಿದ್ದಾರೆ. ಇದೇ ವೇಳೆ ಬಿಜೆಪಿ ನಾಯಕರು ಮೋದಿಯವರನ್ನ ಭಾರತದ ʻಮಾಲಿಕʼ ಅಂತ ಕನ್ಸಿಡರ್ ಮಾಡೋಕೆ ಶುರು ಮಾಡಿದ್ದಾರೆ. ಆದ್ರೆ 140 ಕೋಟಿ ಭಾರತೀಯರು ದೇಶವನ್ನ ಉಳಿಸೋಕೆ ನಿರ್ಧಾರ ಮಾಡಿದ್ರೆ. ದೇಶ ಉಳಿಯಲಿದೆ ಅಂತ ಮಾನ್ ತಿಳಿಸಿದ್ದಾರೆ.
-masthmagaa.com
Contact Us for Advertisement