masthmagaa.com:
ಇನ್ನು ವರುಣಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಸಿದ್ದರಾಮಯ್ಯ ಅವರ ಸ್ವಗ್ರಾಮ ಸಿದ್ದರಾಮನಹುಂಡಿಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿಯಾಗಿದೆ. ಬಿಜೆಪಿಯವರು ಪ್ರಚಾರ ಮಾಡುವಾಗ ಕಾಂಗ್ರೆಸ್ ಕಾರ್ಯಕರ್ತರು ಕಲ್ಲು ತೂರಿರೋ ಆರೋಪ ಕೇಳಿ ಬಂದಿದೆ. ಇದಕ್ಕೆ ಪ್ರತಿಕ್ರಿಯಿಸಿರೋ ಸಂಸದ ಪ್ರತಾಪ ಸಿಂಹ ʻಸೋಮಣ್ಣ ಅವರು ಕರೆ ಕೊಟ್ರೆ ಪ್ರತೀ ಊರಿನಲ್ಲೂ ಸಿದ್ರಾಮಯ್ಯಗೆ ಇದೇ ಗತಿ ಆಗುತ್ತೆ. ಸೋಲಿನ ಹತಾಶೆಯಲ್ಲಿ ಈ ರೀತಿ ಮಾಡಬೇಡಿ. ಸಿದ್ರಾಮಯ್ಯಗೆ ಎಚ್ಚರಿಕೆ ಕೊಡ್ತಿದ್ದೀವಿ. ಇದನ್ನ ಕಂಟಿನ್ಯೂ ಮಾಡಿದ್ರೆ ನಮಗೂ ಶಕ್ತಿ ಇದೆ. ನಮಗೂ ಚೈತನ್ಯ ಇದೆ. ನಾವೂ ನಿಮ್ಮದೇ ರೀತಿಯಲ್ಲಿ ಉತ್ತರ ಕೊಡೋಕೆ ಶುರು ಮಾಡಿದ್ರೆ ವರುಣಾದಲ್ಲಿ ಅಶಾಂತಿ ಏಳುತ್ತೆ. ಆ ರೀತಿ ಮಾಡ್ಕೋಬೇಡಿ ಅಂತ ವಾರ್ನ್ ಮಾಡಿದ್ದಾರೆ. ಇತ್ತ ಘಟನೆಗೆ ಪ್ರತಿಕ್ರಿಯೆ ಕೊಟ್ಟಿರೋ ಸಿದ್ದರಾಮಯ್ಯ, ನಮ್ಮೂರಲ್ಲಿ ಯಾವುದೇ ಗಲಾಟೆ ಆಗ್ತಿರಲಿಲ್ಲ. ಅವರೇ ಗಲಾಟೆ ಶುರು ಮಾಡಿದ್ದಾರೆ. ಆದ್ರೂ ಕೂಡ ಬೇರೆ ಪಕ್ಷದವರು ವೋಟ್ ಕೇಳೋಕೆ ಬಂದಾಗ ಗಲಾಟೆ ಮಾಡಿದ್ರೆ ಅದನ್ನ ನಾನು ಖಂಡಿಸ್ತೀನಿ ಅಂತ ಸಿದ್ರಾಮಯ್ಯ ಹೇಳಿದ್ದಾರೆ. ಇತ್ತ ಕೊರಟಗೆರೆಯಲ್ಲಿ ಪ್ರಚಾರಕ್ಕೆ ಹೋಗಿದ್ದ ಮಾಜಿ ಡಿಸಿಎಂ ಪರಮೇಶ್ವರ್ಗೆ ತಲೆಗೆ ಪೆಟ್ಟಾಗಿದೆ. ಯಾರೋ ಕಿಡಿಗೇಡಿಗಳು ದಾಳಿ ಮಾಡಿದ್ದಾರೆ ಅಂತ ಮಾಹಿತಿ ಇದೆ.
-masthmagaa.com
Contact Us for Advertisement