masthmagaa.com:
ಚುನಾವಣೆ ಒಂದು ವರ್ಷ ಇರೋವಾಗ್ಲೆ ಕಾಂಗ್ರೆಸ್ನ ಒಳಜಗಳ ಈಗ ಜಗಜ್ಜಾಹೀರಾಗ್ತ ಇದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತು ಜಮೀರ್ ಅಹ್ಮದ್ ನಡುವೆ ವಾಗ್ಯುದ್ದ ತಾರಕಕ್ಕೇರ್ತಾ ಇದೆ. ಸಿದ್ದು ಸಿಎಂ ಜಪ ಮಾಡಿದ್ದ ಜಮೀರ್ ಅಹ್ಮದ್ಗೆ ಡಿಕೆಶಿ ವಾರ್ನ್ ಮಾಡಿದ್ರು. ಆದ್ರು ಕೂಡ ಜಮೀರ್ ಹೇಳಿಕೆ ಕೊಡೋದನ್ನ ಮುಂದುವರೆಸಿದ್ರು ಅದಕ್ಕೆ ಈಗ ಡಿಕೆಶಿ ಪರೋಕ್ಷವಾಗಿ ಕುಟುಕಿದ್ದಾರೆ. ʻನನ್ ಲೆವಲ್ಗೆ ಯಾರಾದ್ರು ಮಾತಾಡಿದ್ರೆ ಅವ್ರಿಗೆ ಉತ್ತರ ಕೊಡ್ತೀನಿ. ಕಾಂಗ್ರೆಸ್ನಲ್ಲಿ ವ್ಯಕ್ತಿ ಪೂಜೆ ಮಾಡೋದು ಬಿಡಿ. ಎಲ್ರು ಬಾಯ್ಮುಚ್ಕೊಂಡು ಪಕ್ಷಕ್ಕಾಗಿ ಕೆಲ್ಸ ಮಾಡ್ಬೇಕು ಅಂತ ಗುಡುಗಿದ್ದಾರೆ. ಅದಕ್ಕೆ ಸುಮ್ಮನಾಗದ ಜಮೀರ್ ಮತ್ತೊಂದು ಕಡೆ, ಯಾರ್ ಸ್ವಾಮಿ ಮೊದ್ಲು ಸ್ಟಾರ್ಟ್ ಮಾಡಿದ್ದು. ಅವ್ರೇ ದೊಡ್ಡವರಾಗ್ಲಿ ಬಿಡಿ. ಅವ್ರ ಲೆವೆಲ್ಲೇ ದೊಡ್ಡದು. ಪಕ್ಷ ಪೂಜೆ ಜೊತೆಗೆ ವ್ಯಕ್ತಿ ಪೂಜೆನೂ ಮಾಡ್ಬೇಕಾಗುತ್ತೆ ಅಂತ ಡಿಕೆಶಿ ಕಾಲೆಳಿದಿದ್ದಾರೆ. ನಂತರ ರಾಮನಗರದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಮತ್ತೆ ಮಾತಾಡಿದ ಡಿಕೆಶಿ, ಈ ರೀತಿ ಮಾತಾಡೋರ ಬಗ್ಗೆ ಕಾಂಗ್ರೆಸ್ನ ಶಿಸ್ತುಸಮಿತಿ ಕ್ರಮ ಕೈಗೊಳ್ಳುತ್ತೆ ಅಂತ ಹೇಳಿದ್ದಾರೆ. ಇನ್ನು ಅತ್ತ ಕಾಂಗ್ರೆಸ್ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಿಎಂ ಯಾರಾಗ್ಬೇಕು ಅಂತ ಹೈಕಮಾಂಡ್ ನಿರ್ಧಾರ ಮಾಡ್ತಾರೆ. ಎಲೆಕ್ಷನ್ ಮೊದ್ಲೇ ನಾನ್ ಸಿಎಂ ಆಗ್ತೀನಿ ಅನ್ನೋದು ಸರಿಯಲ್ಲ ಅಂತ ಹೇಳಿದ್ದಾರೆ.
-masthmagaa.com
Contact Us for Advertisement