masthmagaa.com:
ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮದ ಕಿಂಗ್ಪಿನ್ ನೀರಾವರಿ ಇಲಾಖೆಯ ಸಹಾಯಕ ಎಂಜಿನಿಯರ್ ಮಂಜುನಾಥ ಮೇಳಕುಂದಿ ಸಿಐಡಿಗೆ ಶರಣಾಗಿದ್ದಾನೆ. ಇಷ್ಟು ದಿನ ತಲೆಮರೆಸಿಕೊಂಡಿದ್ದ ಆರೋಪಿ ಯಾರಿಗೂ ಯಾವುದೇ ಸುಳಿವು ನೀಡದೇ, ಆಟೋದಲ್ಲಿ ಬಂದು ಶರಣಾಗಿದ್ದಾನೆ. ಮಾಸ್ಕ್ ಹಾಕಿದ್ದ ಮಂಜುನಾಥ ಹೆಗಲಿಗೆ ಬ್ಯಾಗ್ ಏರಿಸಿಕೊಂಡು ಕಚೇರಿ ಒಳಗೆ ಹೋಗಿದ್ದಾನೆ. ಅಷ್ಟೇ ಅಲ್ಲ.. ಈ ವೇಳೆ ಅಲ್ಲಿದ್ದ ಮಾಧ್ಯಮದವರ ಬಳಿ ಪ್ರಕರಣದಲ್ಲಿ ನನ್ನ ಯಾವುದೇ ಪಾತ್ರವಿಲ್ಲ.. ನಂದೇನೂ ತಪ್ಪಿಲ್ಲ.. ಸುಮ್ ಸುಮ್ನೆ ಈ ಕೇಸಲ್ಲಿ ನನ್ನ ತಗಲಾಕ್ತಿದ್ದಾರೆ.. ನನಗೆ ಹುಷಾರಿರಲಿಲ್ಲ. ಹೀಗಾಗಿ ಮಂಗಳೂರಿಗೆ ಹೋಗಿದ್ದೆ ಅಂತ ಹೇಳಿದ್ದಾನೆ. ಅಂದಹಾಗೆ ಮಂಜುನಾಥ ಸೇರಿದಂತೆ ಹೆಡ್ ಮಾಸ್ಟರ್ ಕಾಶಿನಾಥ, ಮಹಿಳಾ ಅಭ್ಯರ್ಥಿ ಶಾಂತಿಬಾಯಿ ಮತ್ತು ಓರ್ವ ಶಿಕ್ಷಕಿ ವಿರುದ್ಧ ಕೋರ್ಟ್ ಅರೆಸ್ಟ್ ವಾರೆಂಟ್ ಜಾರಿ ಮಾಡಿತ್ತು. ಇನ್ನು ತನಿಖೆಯಲ್ಲಿ ಬಂಧಿತರಾಗಿರೋ ಆರೋಪಿಗಳು ಸಿಐಡಿ ಮುಂದೆ ಪೊಲೀಸ್ ಇಲಾಖೆಯ ಕೆಲವರು ಭಾಗಿಯಾಗಿರುವ ಬಗ್ಗೆ ಮಾಹಿತಿ ನೀಡಿದೆ ಅಂತ ವರದಿಯಾಗಿದೆ.
-masthmagaa.com
Contact Us for Advertisement