masthmagaa.com:
ಭಾರತದ ಅಧ್ಯಕ್ಷತೆಯಲ್ಲಿ ನಡೆದ ಜಿ20 ಶೃಂಗಸಬೆ ಜಗತ್ತಿಗೆ ಮಾರ್ಗವನ್ನ ಹಾಕಿಕೊಟ್ಟಿದೆ ಅಂತ ವಿಶ್ವ ಬ್ಯಾಂಕ್ ಮುಖ್ಯಸ್ಥ ಅಜಯ್ ಬಂಗಾ ಅವ್ರು ಹೇಳಿದ್ದಾರೆ. ಇದೇ ವೇಳೆ ಯಾವಾಗಲೂ ಜಾಗತಿಕವಾಗಿ ಹಲವು ಚಾಲೆಂಜ್ಗಳಿರುತ್ತವೆ ಆದ್ರೆ ಭಾರತ ಒಮ್ಮತದಿಂದ ಕೆಲಸ ಮಾಡುವ ಮೂಲಕ ಜಗತ್ತಿಗೆ ದಾರಿ ತೋರಿಸಿದೆ ಅಂತ ಅಜಯ್ ಹಾಡಿ ಹೊಗಳಿದ್ದಾರೆ. ಜೊತೆಗೆ ಈ ಶೃಂಗಸಭೆಯ ಘೋಷಣೆಯನ್ನ ಒಮ್ಮತದಿಂದ ಎಲ್ಲರೂ ಒಪ್ಪಿಕೊಳ್ಳುವಂತೆ ಮಾಡಿರುವ ಭಾರತದ ನಾಯಕತ್ವ ಹಾಗೂ ಜಿ20 ನಾಯಕರನ್ನ ಶ್ಲಾಘಿಸುತ್ತೇನೆ ಅಂತ ಹೇಳಿದ್ದಾರೆ.
-masthmagaa.com
Contact Us for Advertisement