masthmagaa.com:
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವ್ರ ಬಂಧನ ಖಂಡಿಸಿ ಇದೀಗ ಇಂಡಿಯಾ ಒಕ್ಕೂಟ ನಾಯಕರು ಬೀದಿಗಿಳಿಯೋಕೆ ಸಿದ್ಧತೆ ಮಾಡ್ಕೊಂಡಿದ್ದಾರೆ. ಮಾರ್ಚ್ 31ರಂದು ದೆಹಲಿಯ ರಾಮ್ಲೀಲಾ ಮೈದಾನದಲ್ಲಿ ʻಬಿಜೆಪಿ ಸರ್ಕಾರದ ಸರ್ವಾಧಿಕಾರ ಮತ್ತು ಅರವಿಂದ್ ಕೇಜ್ರಿವಾಲ್ ಅವ್ರ ಫೇಕ್ ಅರೆಸ್ಟ್ʼ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ. ಹೀಗಂತ ಇಂಡಿಯಾ ಬ್ಲಾಕ್ ಪ್ರೆಸ್ ಕಾನ್ಫರೆನ್ಸ್ನಲ್ಲಿ ಮಾಹಿತಿ ನೀಡಿದೆ. ʻನಮ್ಮ ದೇಶ ಮತ್ತು ಪ್ರಜಾಪ್ರಭುತ್ವ ಅಪಾಯದಲ್ಲಿದೆ. ದೇಶದ ಹಿತಾಸಕ್ತಿ ಮತ್ತು ಪ್ರಜಾಪ್ರಭುತ್ವ ಕಾಪಾಡಲು ಇಂಡಿಯಾ ಬ್ಲಾಕ್ ಪಾರ್ಟಿಗಳು ಸೇರಿ ʻಮಹಾ ರ್ಯಾಲಿʼ ನಡೆಸಲಿದೆ ಅಂತ ಹೇಳಿದೆ. ಇತ್ತ ಪ್ರತಿಭಟನೆಗೆ ಆಪ್ ನಾಯಕರು ಸಕಲ ಸಿದ್ದತೆ ಮಾಡ್ಕೊಳ್ತಿದ್ರೆ…ಅತ್ತ ದೆಹಲಿಯಲ್ಲಿ ಭದ್ರತೆ ಹೆಚ್ಚಿಸಲು ಪೊಲೀಸರು ಪ್ಲಾನ್ ಮಾಡಿದ್ದಾರೆ. ಬಿಜೆಪಿಯ ಪ್ರಧಾನ ಕಚೇರಿ, ಆದಾಯ ತೆರಿಗೆ ಕಚೇರಿ ಹಾಗೂ ಜಾರಿ ನಿರ್ದೇಶನಾಲಯ ಕಚೇರಿಯತ್ತ ಸಾಗೋ ರಸ್ತೆಗಳಲ್ಲಿ ಮಲ್ಟಿ-ಲೇಯರ್ ಬ್ಯಾರಿಕೇಡ್ಗಳನ್ನ ನಿಯೋಜಿಸಲಾಗಿದೆ. ಈ ಲೊಕೇಷನ್ಗಳಲ್ಲಿ ಆಪ್ ಪ್ರತಿಭಟನೆ ನಡೆಯೋ ಸಾಧ್ಯತೆಯಿದೆ ಎನ್ನಲಾಗ್ತಿದೆ. ಇನ್ನು ಕಾನೂನು ಸುವ್ಯವಸ್ಥೆ ಕಾಪಾಡೋಕೆ ಅರೆಸೇನಾ ಸಿಬ್ಬಂದಿಯನ್ನ ಕೂಡ ನಿಯೋಜಿಸಲಾಗಿದೆ.
-masthmagaa.com
Contact Us for Advertisement