ಉಗ್ರರಿಗೆ ದುಡ್ಡು ಕೋಡೋದನ್ನ ನಿಲ್ಸಿ! ಪಾಕ್‌ಗೆ ಕರೆಸಿ ಉಗಿದ ಭಾರತ!

masthmagaa.com:

ಗೋವಾದಲ್ಲಿ ನಡೀತಾಯಿರೋ SCO ಒಕ್ಕೂಟದ ವಿದೇಶಾಂಗ ಸಚಿವರ ಸಭೆಯಲ್ಲಿ ಭಾರತೀಯ ವಿದೇಶಾಂಗ ಸಚಿವ ಎಸ್‌ ಜೈಶಂಕರ್‌ ಸಭೆಯ ಆರಂಭದಲ್ಲೇ ಭಯೋತ್ಪಾದಕತೆ ಬಗ್ಗೆ ಟಫ್‌ ಆಗಿ ಮಾತಾಡಿದ್ದಾರೆ. ಗಡಿಯಾಚೆಗಿನ ಭಯೋತ್ಪಾದಕತೆಯನ್ನ ಉತ್ತೇಜಿಸುವ ಹಾಗೂ ಅದಕ್ಕೆ ಹಣಕಾಸು ಬೆಂಬಲವನ್ನ ನೀಡುವ ಮಾರ್ಗಗಳನ್ನ ಬ್ಲಾಕ್‌ ಮಾಡಬೇಕು ಎಂದಿದ್ದಾರೆ. ಜಗತ್ತು ಕೋವಿಡ್‌ ಹಾಗೂ ಅದರ ಪರಿಣಾಮಗಳನ್ನ ಎದುರಿಸ್ತಿರೊ ಹೊತ್ತಲ್ಲಿ ಭಯೋತ್ಪಾದಕತೆ ಯಾವುದೇ ಅಡೆತಡೆಗಳಿಲ್ಲದೇ ಮುಂದುವರಿತಿದೆ. ಭಯೋತ್ಪಾದಕತೆಗೆ ಯಾವುದೇ ರೀತಿಯ ಸಮರ್ಥನೆ ಇಲ್ಲ. ಹಾಗೂ ಗಡಿಯಾಚೆಗಿನ ಭಯೋತ್ಪಾದಕತೆ ಸೇರಿದಂತೆ ಎಲ್ಲ ರೀತಿಯ ಉಗ್ರ ಕೃತ್ಯಗಳನ್ನ ಸ್ಟಾಪ್‌ ಮಾಡಬೇಕು ಅಂತ ಹೇಳಿದ್ದಾರೆ. ಜೊತೆಗೆ ಭಯೋತ್ಪಾದಕತೆಯನ್ನ ಎದುರಿಸೋದು SCOದ ಮೂಲ ಗುರಿಗಳಲ್ಲಿ ಒಂದಾಗಿದೆ ಅನ್ನೊದನ್ನ ಸದಸ್ಯ ರಾಷ್ಟ್ರಗಳು ಮರಿಬಾರ್ದು ಅಂತ ಜೈಶಂಕರ್‌ ಒತ್ತಿ ಹೇಳಿದ್ದಾರೆ. ಅಂದ್ಹಾಗೆ ಪಾಕ್‌ನ ವಿದೇಶಾಂಗ ಸಚಿವ ಭಿಲಾವಾಲ ಬುಟ್ಟೊ ಜರ್ಧಾರಿ ಉಪಸ್ಥಿತರಿರೋ ಈ ಸಭೆಯಲ್ಲಿ ಭಯೋತ್ಪಾದಕತೆ ಬಗ್ಗೆ ಮಾತಾಡಿರೋದು ಮಹತ್ವ ಪಡೆದುಕೊಂಡಿದೆ. ಎಲ್ಲ ಮಾತುಗಳನ್ನ ಇನ್‌ಡೈರೆಕ್ಟಾಗಿ ಬುಟ್ಟೊ ಅವ್ರಿಗೆ ಜೈಶಂಕರ್‌ ಹೇಳಿದ್ದಾರೆ ಅಂತ ವಿಶ್ಲೇಷಿಸಲಾಗ್ತಿದೆ.

-masthmagaa.com

Contact Us for Advertisement

Leave a Reply