masthmagaa.com:
ಲಡಾಖ್ನ ಪಶ್ಚಿಮ ಹಿಮಾಲಯ ಪ್ರದೇಶದಲ್ಲಿ ಭಾರತ ಮತ್ತು ಚೀನಾದ ನಡುವಿನ ಪರಿಸ್ಥಿತಿ ತುಂಬಾ ಸೂಕ್ಷ್ಮ ಹಾಗೂ ಅಪಾಯಕಾರಿಯಾಗಿದೆ ಅಂತ ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ. ಕೆಲವು ಭಾಗಗಳಲ್ಲಿ ಉಭಯ ದೇಶಗಳ ಮಿಲಿಟರಿ ನಿಯೋಜನೆಗಳು ಬಹಳ ಹತ್ತಿರದಲ್ಲಿವೆ. ಹಾಗಾಗಿ ಪರಿಸ್ಥಿತಿ ಅಪಾಯಕಾರಿಯಾಗಿದೆ ಅಂತ ಜೈಶಂಕರ್ ಹೇಳಿದ್ದಾರೆ. ಜೊತೆಗೆ ಚೀನಾ ಭಾರತಕ್ಕೆ ಒಡ್ಡುತ್ತಿರುವ ಬೆದರಿಕೆಯನ್ನ ಸಚಿವ ಜೈಶಂಕರ್ ಅರ್ಥ ಮಾಡಿಕೊಂಡಿಲ್ಲ ಅಂತ ರಾಹುಲ್ ಗಾಂಧಿ ಹೇಳಿದ್ರು. ಇದಕ್ಕೆ ಪ್ರತಿಕ್ರಿಯೆ ನೀಡಿರೋ ಜೈಶಂಕರ್ ʻಯಾರೋ ಒಬ್ಬರು ಚೀನಾದ ಮೇಲೆ ಜೊಲ್ಲು ಸುರಿಸೋದನ್ನ ಭಾರತದ ಪ್ರಜೆಯಾಗಿ ನಾನು ನೋಡೋಕೆ ಕಷ್ಟ ಆಗ್ತಿದೆ ಅಂತ ತಿರುಗೇಟು ನೀಡಿದ್ದಾರೆ. ಪಾಂಡಾವೊಂದು ಚೀನಾದ ಹದ್ದು ಆಗೋಕೆ ಪ್ರಯತ್ನ ಪಟ್ರೆ ಅದು ಹಾರೋಕೆ ಸಾಧ್ಯವಿಲ್ಲ ಅಂತ ಜೈಶಂಕರ್ ಹೇಳಿದ್ದಾರೆ. ಚೀನಾ ಪ್ರಬಲ ಉತ್ಪಾದಕ ದೇಶವಾಗಿದ್ದು, ಭಾರತದ ಮೇಕ್ ಇನ್ ಇಂಡಿಯಾ ವರ್ಕ್ ಆಗಲ್ಲ ಅಂತ ರಾಹುಲ್ ಅಂತಾರೆ. ದೇಶದ ನೈತಿಕತೆಯನ್ನ ದುರ್ಬಲಗೊಳಿಸೊ ಪ್ರಯತ್ನ ಮಾಡ್ತಾರೆ ಅಂತ ಜೈ ಶಂಕರ್ ರಾಹುಲ್ ಮೇಲೆ ವಾಗ್ದಾಳಿ ಮಾಡಿದ್ದಾರೆ.
-masthmagaa.com
Contact Us for Advertisement