ಚೀನಾ-ಭಾರತ ಸಂಬಂಧ ನಾರ್ಮಲ್‌ ಆಗೋಕೆ ಸಾಧ್ಯವಿಲ್ಲ ಎಂದಿದ್ಯಾಕೆ ಜೈ ಶಂಕರ್‌!

masthmagaa.com:

ಭಾರತದ ಗಡಿಯಲ್ಲಿ ಚೀನಾ ಅಕ್ರಮವಾಗಿ ಕಾಮಗಾರಿ ನಡೆಸ್ತಿವೆ ಅನ್ನೋ ವರದಿಗಳು, ಚೀನಾ, ಭಾರತದ ಭೂಮಿಯನ್ನ ಗಡಿಯಲ್ಲಿ ನಿಧಾನವಾಗಿ ಕಬ್ಜಾ ಮಾಡಿಕೊಳ್ಳುತ್ತಿವೆ ಅನ್ನೋ ಆರೋಪಗಳು ಕೇಳಿ ಬರ್ತಿರೋ ಹೊತ್ತಲ್ಲೇ ವಿದೇಶಾಂಗ ಸಚಿವ ಎಸ್‌ ಜೈ ಶಂಕರ್‌ ಈ ಬಗ್ಗೆ ಮಾತನಾಡಿದ್ದಾರೆ. ಎಲ್‌ಎಸಿ ಗಡಿಯಲ್ಲಿ ಯಥಾ ಸ್ಥಿತಿ ಬದಲಾವಣೆ ಮಾಡುವ ಯಾವುದೇ ಸಣ್ಣ ಪ್ರಯತ್ನವನ್ನೂ ಭಾರತ ಸಹಿಸಿಕೊಳ್ಳುವುದಿಲ್ಲ ಅಂತ ಹೇಳಿದ್ದಾರೆ. ಜೊತೆಗೆ ಚೀನಾ ಎಲ್ಲಿವರೆಗೆ ಗಡಿಯಲ್ಲಿ ಮಿಲಿಟರಿ ನಿಯೋಜನೆ ಮಾಡೋದು, ಕಟ್ಟಡಗಳನ್ನ ಕಟ್ಟುವಂತಹ ಕಾಮಗಾರಿ ಕೆಲಸ ನಡೆಸ್ತಿರುತ್ತೋ ಅಲ್ಲಿವರೆಗೂ ಭಾರತ ಚೀನಾ ಸಂಬಂಧ ನಾರ್ಮಲ್‌ ಆಗೋಕೆ ಸಾಧ್ಯವಿಲ್ಲ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply