ನಟ ದರ್ಶನ್ ಈಗಲೇ ಕ್ಷಮೆ ಕೇಳಬೇಕು: ಇಂದ್ರಜಿತ್ ಲಂಕೇಶ್!

masthmagaa.com:
ಸಂದೇಶ್ ಪ್ರಿನ್ಸ್ ಹೋಟೆಲ್ ಸಿಬ್ಬಂದಿ ಮೇಲೆ ದರ್ಶನ್ ಮತ್ತು ಸ್ನೇಹಿತರಿಂದ ಹಲ್ಲೆ ನಡೆದಿದೆ ಎಂಬ ಪ್ರಕರಣದ ವಿಷಯಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ತಮ್ಮ ವಕೀಲ ಶ್ಯಾಮ್ ಸುಂದರ ಜೊತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತಾಡಿದ್ದಾರೆ. ಸಾಮಾಜಿಕ ಹಿತದೃಷ್ಟಿ ಮತ್ತು ಕಳಕಳಿಯಿಂದ ನಾನು ಹೋರಾಟ ಮಾಡುತ್ತಿದ್ದೇನೆ. ಅನ್ಯಾಯವಾಗಿರುವುದು ಬಡವರಿಗೆ, ಅವರಿಗೆ ನ್ಯಾಯ ಸಿಗಬೇಕು, ಹಾಗಾಗಿ ಹೋಟೆಲ್ ಸಿಬ್ಬಂದಿಗೆ ನ್ಯಾಯ ಕೊಡಿಸುವ ಉದ್ದೇಶದಿಂದ ನಾನು ಬಂದೆನೆ ಹೊರತು ಇದರ ಹಿಂದೆ ಯಾವುದೇ ವೈಯಕ್ತಿಕ ಉದ್ದೇಶ ಇಲ್ಲ ಎಂದು ಹೇಳಿದ್ದಾರೆ.
ಹಲ್ಲೆ ಮಾಡಿದವರು ದರ್ಶನ್ ಆಗಿರಲಿ ಅಥವಾ ಇನ್ಯಾರೆ ಆಗಿರಲಿ ಕ್ಷಮೆ ಕೇಳಬೇಕು. ಅನ್ಯಾಯ ಆದವರಿಗೆ ನ್ಯಾಯ ಸಿಗಬೇಕು. ಅದನ್ನ ಬಿಟ್ಟು ಜಾತಿ ವಿವಾದ ಅನ್ನೋದು ಅಥವಾ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಹೆಸರು ಮತ್ತು ಸಿದ್ದರಾಮಯ್ಯ ಅವರ ಹೆಸರನ್ನ ಮಧ್ಯದಲ್ಲಿ ತರೋದು ಸರಿ ಅಲ್ಲ, ಅವರಿಬ್ಬರಿಗೂ ಈ ಪ್ರಕರಣಕ್ಕೂ ಸಂಬಂಧ ಇಲ್ಲ ಎಂದು ಹೇಳಿದ್ದಾರೆ.
-masthmagaa.com
Contact Us for Advertisement

Leave a Reply