ರಸ್ತೆ ಅಪಘಾತದ ಬಳಿಕ IPL ಅಂಗಳಕ್ಕೆ ಪಂತ್‌: ಪ್ರಸಿಧ್ ಕೃಷ್ಣ ಔಟ್!

masthmagaa.com:

ಟೀಮ್‌ ಇಂಡಿಯಾ ಸ್ಫೋಟಕ ಲೆಫ್ಟ್‌ ಹ್ಯಾಂಡ್‌ ಬ್ಯಾಟರ್‌ ರಿಷಭ್‌ ಪಂತ್‌ ಮುಂಬರೋ 2024ರ IPL ಟೂರ್ನಿ ಆಡಲು ಫಿಟ್‌ ಆಗಿದ್ದಾರೆ ಅಂತ ಬಿಸಿಸಿಐ ಹೇಳಿದೆ. ಈ ಮೂಲಕ ರಸ್ತೆ ಅಪಘಾತದಲ್ಲಿ ಗಾಯಗೊಂಡು ಪ್ರಾಣಾಪಾಯಯದಿಂದ ಪಾರಾಗಿದ್ದ ಪಂತ್‌ ದಿಲ್ಲಿ ಕ್ಯಾಪಿಟಲ್ಸ್‌ ಪರ ವಿಕೆಟ್ ಕೀಪರ್-ಬ್ಯಾಟರ್‌ ಆಗಿ ಕಣಕ್ಕಿಳಿಯಲಿದ್ದಾರೆ. ಇನ್ನು ಈ ಬಾರಿ IPL ನಿಂದ ಟೀಮ್‌ ಇಂಡಿಯಾ ವೇಗಿ, ಕನ್ನಡಿಗ ಪ್ರಸಿಧ್‌ ಕೃಷ್ಣ ಹೊರಗುಳಿಯಲ್ಲಿದ್ದಾರೆ ಅಂತ ಮಾಹಿತಿ ಸಿಕ್ಕಿದೆ. ಸದ್ಯ ಗಾಯದ ಸಮಸ್ಯೆಯಿಂದ ಬಳಲ್ತಿರೋ ಕಾರಣ ಕೃಷ್ಣ IPLನಲ್ಲಿ ಆಡಲ್ಲ ಅನ್ನೊದು ಕನ್ಫರ್ಮ್‌ ಆಗಿದೆ.

-masthmagaa.com

Contact Us for Advertisement

Leave a Reply