ಈಶ್ವರಪ್ಪ ರಾಜೀನಾಮೆ ನೀಡಿದ್ರೆ ಒಳ್ಳೇದು: ಮುತಾಲಿಕ್​, ಹೆಚ್​ಡಿಕೆ

masthmagaa.com:

ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್​ ಮುತಾಲಿಕ್​ ಮಾತನಾಡಿ, ಇಂಥಾ ಸಂದರ್ಭದಲ್ಲಿ ಈಶ್ವರಪ್ಪನವರು ರಾಜೀನಾಮೆ ಕೊಡ್ಬೇಕು. ನೀವು ತಪ್ಪಿತಸ್ಥರು ಅಲ್ಲ ಅಂತಾದ್ರೆ ಮತ್ತೆ ಸಚಿವ ಸಂಪುಟಕ್ಕೆ ವಾಪಸ್​ ಬನ್ನಿ ಎಂದಿದ್ದಾರೆ.
ಮಾಜಿ ಸಿಎಂ ಯಡಿಯೂರಪ್ಪ ಮಾತನಾಡಿ, ನಾನು ಈ ಬಗ್ಗೆ ಏನೂ ಪ್ರತಿಕ್ರಿಯೆ ಕೊಡಲ್ಲ. ಈಶ್ವರಪ್ಪನವರು ತಮ್ಮ ಪಾತ್ರ ಏನೂ ಇಲ್ಲ ಅಂತ ಹೇಳಿದ್ದಾರೆ. ತನಿಖೆ ನಡೀಲಿ ಗೊತ್ತಾಗುತ್ತೆ ಅಂತ ಬಿಎಸ್​ವೈ ಎಂದಿದ್ದಾರೆ.
ಮಾಜಿ ಸಿಎಂ ಕುಮಾರಸ್ವಾಮಿ ಮಾತನಾಡಿ, ಸರ್ಕಾರ ಮುಜುಗರಕ್ಕೆ ಒಳಗಾಗ್ಬಾರ್ದು ಅಂತಿದ್ರೆ ಸರ್ಕಾರ ಮೊದಲು ಈಶ್ವರಪ್ಪನವರಿಂದ ರಾಜೀನಾಮೆ ಪಡೀಬೇಕು, ಆಮೇಲೆ ಪ್ರಕರಣದ ಸತ್ಯಾಸತ್ಯತೆಯನ್ನ ಜನರ ಮುಂದೆ ಇಡಬೇಕು ಎಂದಿದ್ದಾರೆ.

-masthmagaa.com

Contact Us for Advertisement

Leave a Reply