masthmagaa.com:
ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಮಾತನಾಡಿ, ಇಂಥಾ ಸಂದರ್ಭದಲ್ಲಿ ಈಶ್ವರಪ್ಪನವರು ರಾಜೀನಾಮೆ ಕೊಡ್ಬೇಕು. ನೀವು ತಪ್ಪಿತಸ್ಥರು ಅಲ್ಲ ಅಂತಾದ್ರೆ ಮತ್ತೆ ಸಚಿವ ಸಂಪುಟಕ್ಕೆ ವಾಪಸ್ ಬನ್ನಿ ಎಂದಿದ್ದಾರೆ.
ಮಾಜಿ ಸಿಎಂ ಯಡಿಯೂರಪ್ಪ ಮಾತನಾಡಿ, ನಾನು ಈ ಬಗ್ಗೆ ಏನೂ ಪ್ರತಿಕ್ರಿಯೆ ಕೊಡಲ್ಲ. ಈಶ್ವರಪ್ಪನವರು ತಮ್ಮ ಪಾತ್ರ ಏನೂ ಇಲ್ಲ ಅಂತ ಹೇಳಿದ್ದಾರೆ. ತನಿಖೆ ನಡೀಲಿ ಗೊತ್ತಾಗುತ್ತೆ ಅಂತ ಬಿಎಸ್ವೈ ಎಂದಿದ್ದಾರೆ.
ಮಾಜಿ ಸಿಎಂ ಕುಮಾರಸ್ವಾಮಿ ಮಾತನಾಡಿ, ಸರ್ಕಾರ ಮುಜುಗರಕ್ಕೆ ಒಳಗಾಗ್ಬಾರ್ದು ಅಂತಿದ್ರೆ ಸರ್ಕಾರ ಮೊದಲು ಈಶ್ವರಪ್ಪನವರಿಂದ ರಾಜೀನಾಮೆ ಪಡೀಬೇಕು, ಆಮೇಲೆ ಪ್ರಕರಣದ ಸತ್ಯಾಸತ್ಯತೆಯನ್ನ ಜನರ ಮುಂದೆ ಇಡಬೇಕು ಎಂದಿದ್ದಾರೆ.
-masthmagaa.com
Contact Us for Advertisement