masthmagaa.com:
ನೆನ್ನೆಯಿಂದ ಬೆಂಗಳೂರು ನಗರದ ಆರ್.ಟಿ. ನಗರ, ಮಲ್ಲೇಶ್ವರಂ, ಸದಾಶಿವನಗರ, ಡಾಲರ್ಸ್ ಕಾಲೋನಿ, ಮತ್ತಿಕೆರೆ, ಸರ್ಜಾಪುರ ರಸ್ತೆ ಸೇರಿದಂತೆ 10ಕ್ಕೂ ಹೆಚ್ಚು ಕಡೆಗಳಲ್ಲಿ ಐಟಿ ದಾಳಿ ನಡೆದಿದೆ. ಐಟಿ ದಾಳಿ ಇವತ್ತೂ ಮುಂದುವರೆದಿದ್ದು, ಬೆಂಗಳೂರಿನ ಬಿಲ್ಡರ್ಸ್, ಚಿನ್ನದ ವ್ಯಾಪಾರಿಗಳು ಹಾಗೂ ಗುತ್ತಿಗೆದಾರರ ಮನೆಯನ್ನು ಜಪ್ತಿ ಮಾಡಲಾಗ್ತಿದೆ. ನೆನ್ನೆ ಒಮ್ಮೆಲೆ ಆರ್.ಟಿ. ನಗರದ ಎರಡು ಸ್ಥಳಗಳಲ್ಲಿ ಐಟಿ ದಾಳಿ ನಡೆದಿದ್ದು, ಕಂತೆ ಕಂತೆ ನೋಟುಗಳನ್ನ ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಬೆಂಗಳೂರಿನ ಆತ್ಮಾನಂದ ಕಾಲೋನಿಯ ಬಿಬಿಎಂಪಿ ಗುತ್ತಿಗೆದಾರ ಹಾಗೂ ಅವರ ಮಗಳ ಮನೆಯ ಮಂಚದಡಿಯಲ್ಲಿ 23 ಬಾಕ್ಸ್ಗಳಲ್ಲಿ ರಾಶಿ ಹಣ ಪತ್ತೆಯಾಗಿವೆ. 23 ಬಾಕ್ಸ್ಗಳಲ್ಲಿ 500 ಮುಖಬೆಲೆಯ ಒಟ್ಟು 42 ಕೋಟಿ ರೂಪಾಯಿಗೂ ಅಧಿಕ ಹಣವನ್ನು ವಶಪಡಿಸಿಕೊಂಡಿದ್ದಾರೆ. ಬಳಿಕ ಗಣೇಶ ಬ್ಲಾಕ್ನಲ್ಲಿರುವ ಮಾಜಿ ಕಾರ್ಪೋರೇಟರ್ ಅಶ್ವತ್ಥಾಮ ನಿವಾಸದ ಮೇಲೆ ಐಟಿ ದಾಳಿ ನಡೆಸಿ, ಅಲ್ಲಿಯೂ ಕೋಟ್ಯಂತರ ರೂಪಾಯಿ ಪತ್ತೆಯಾಗಿದೆ. ಸಧ್ಯ ಸಿಕ್ಕಿರುವ ಕೋಟ್ಯಂತರ ರೂಪಾಯಿ ಹಣ ಯಾರಿಗೆ ಸೇರಿದ್ದು ಅಂತ ಅಧಿಕಾರಿಗಳು ತನಿಖೆ ನಡೆಸ್ತಾ ಇದ್ದಾರೆ.
-masthmagaa.com
Contact Us for Advertisement