masthmagaa.com:
ರಾಜ್ಯದಲ್ಲಿ ʻಜಾತಿ ಗಣತಿʼ ಮೂಲ ಪ್ರತಿ ಕಾಣೆಯಾಗಿರೋ ವಿಚಾರ ಭಾರೀ ಸದ್ದು ಮಾಡ್ತಾ ಇದೆ. ಈ ಬೆನ್ನಲ್ಲೇ ಗೃಹ ಸಚಿವ ಜಿ. ಪರಮೇಶ್ವರ್ ಅವ್ರು, ಹಿಂದುಳಿದ ವರ್ಗಗಳ ಆಯೋಗ ಸಿದ್ದ ಪಡಿಸಿದ್ದ ಜಾತಿ ಗಣತಿ ಮೂಲ ಪ್ರತಿ ಕಾಣೆಯಾಗಿದೆ ಅನ್ನೋದೆಲ್ಲ ಸುಳ್ಳು ಅಂತ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವ್ರು, ಜಾತಿ ಗಣತಿ ವರದಿ ಸಲ್ಲಿಸಲು ಆಯೋಗಕ್ಕೆ ಟೈಮ್ ನೀಡಿದ್ದು, ಅಯೋಗದ ಅಧ್ಯಕ್ಷರ ಅಧಿಕಾರ ಅವಧಿಯನ್ನ ಒಂದು ತಿಂಗಳು ವಿಸ್ತರಿಸಲಾಗಿದೆ. ವರದಿ ಕೊಟ್ಟ ನಂತರ ಏನ್ ಮಾಡ್ಬೇಕು ಅಂತ ಸರ್ಕಾರ ತೀರ್ಮಾನ ಮಾಡುತ್ತೆ. ಇದೀಗ ವರದಿ ಸಲ್ಲಿಕೆಗೂ ಮೊದಲೇ ಪರ-ವಿರೋಧ ಅಭಿಪ್ರಾಯಗಳು ಕೇಳಿ ಬರ್ತಿವೆ. ಆದ್ರೆ ವರದಿಯಲ್ಲಿ ಏನಿದೆ ಅಂತ ಗೊತ್ತಿಲ್ದೆ ಈ ರೀತಿ ಚರ್ಚೆ ಮಾಡೋದು ಎಷ್ಟ್ರ ಮಟ್ಟಿಗೆ ಸರಿ ಅಂತ ಪ್ರಶ್ನಿಸಿದ್ದಾರೆ.
-masthmagaa.com
Contact Us for Advertisement