ಆಂಧ್ರ ಪ್ರದೇಶದ ಸಿಎಂ ಜಗನ್‌ ಮೋಹನ್‌ ಮೇಲೆ ಕಲ್ಲು ತೂರಾಟ!

masthmagaa.com:

ಆಂಧ್ರ ಪ್ರದೇಶದ ವಿಜಯವಾಡದಲ್ಲಿ ನಡೆದ ರೋಡ್‌ ಶೋ ವೇಳೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ ಪರಿಣಾಮ ಆಂಧ್ರ ಸಿಎಂ ಜಗನ್‌ ಮೋಹನ್‌ ರೆಡ್ಡಿ ಗಾಯಗೊಂಡಿದ್ದಾರೆ. ʻಮೇಮಂತ ಸಿದ್ದಂʼ ಬಸ್‌ ಯಾತ್ರೆ ವೇಳೆ ನಡೆದ ಈ ಘಟನೆಯಿಂದ ಜಗನ್‌ ಮೋಹನ್‌ ಅವ್ರ ಕಣ್ಣಿನ ಮೇಲೆ, ಹಣೆಯ ಎಡಭಾಗದಲ್ಲಿ ಗಾಯವಾಗಿದೆ. ಬಳಿಕ ಪ್ರಾಥಮಿಕ ಚಿಕಿತ್ಸೆ ಪಡೆದು ಜಗನ್‌ ಮತ್ತೆ ಯಾತ್ರೆ ಕಂಟಿನ್ಯೂ ಮಾಡಿದ್ದಾರೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿಯವ್ರು ರಿಯಾಕ್ಟ್‌ ಮಾಡಿದ್ದು, ʻಜಗನ್‌ ಮೋಹನ್‌ಯವ್ರು ಆದಷ್ಟು ಬೇಗ ಗುಣಮುಖರಾಗಲಿ. ಮತ್ತವ್ರ ಉತ್ತಮ ಆರೋಗ್ಯಕ್ಕಾಗಿ ನಾನು ಪ್ರಾರ್ಥನೆ ಮಾಡ್ತೀನಿʼ ಅಂತ ಪೋಸ್ಟ್‌ ಮಾಡಿ ಹಾರೈಸಿದ್ದಾರೆ. ವಿಶೇಷ ಅಂದ್ರೆ ಜಗನ್‌ ವಿರೋಧಿ ಚಂದ್ರಬಾಬು ನಾಯ್ಡು ಅವರ TDP ಹಾಗೂ ಜನಸೇನಾ, ಬಿಜೆಪಿ ಜೊತೆ NDA ಮೈತ್ರಿಕೂಟದಲ್ಲಿವೆ.

-masthmagaa.com

Contact Us for Advertisement

Leave a Reply