masthmagaa.com:
ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ವಿಚಾರವಾಗಿ ರಾಜ್ಯಸಭೆಯಲ್ಲಿ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಸಭಾಧ್ಯಕ್ಷ ಜಗದೀಪ್ ಧನ್ಕರ್ ಮಧ್ಯೆ ಜಟಾಪಟಿ ನಡೆದಿದೆ. ಚರಣ್ ಸಿಂಗ್ ಅವ್ರಿಗೆ ಭಾರತ ರತ್ನ ನೀಡಿದ್ದಕ್ಕೆ ಹರ್ಷ ವ್ಯಕ್ತ ಪಡಿಸಿ ಅವ್ರ ಮೊಮ್ಮಗ, RLD ಪಾರ್ಟಿ ಮುಖ್ಯಸ್ಥ ಜಯಂತ್ ಚೌಧರಿ ಮಾತನಾಡಲು ಆರಂಭಿಸಿದ್ರು. ಈ ವೇಳೆ ಜಯಂತ್ ಭಾಷಣಕ್ಕೆ ಖರ್ಗೆ ಆಕ್ಷೇಪ ವ್ಯಕ್ತಪಡಿಸಿದ್ರು. ಇದರಿಂದ ಕುಪಿತಗೊಂಡ ಸಭಾಧ್ಯಕ್ಷ ಜಗದೀಪ್ ಧನ್ಕರ್, ನೀವು ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವ್ರಿಗೆ, ಅವರ ಪರಂಪರೆಗೆ ಅವಮಾನ ಮಾಡ್ತಿದ್ದಿರಿ ಅಂತ ಗದರಿದ್ದಾರೆ. ಅಂದ್ಹಾಗೆ ಜಯಂತ್ ಚೌಧರಿ ಇತ್ತೀಚೆಗಷ್ಟೇ I.N.D.I ಮೈತ್ರಿ ಕೂಟ ಬಿಟ್ಟು ಬಿಜೆಪಿ ಜೊತೆ ದೋಸ್ತಿ ಮಾಡ್ಕೊಂಡಿದ್ರು.
-masthmagaa.com
Contact Us for Advertisement