masthmagaa.com:
ಜಮ್ಮು-ಕಾಶ್ಮೀರದ ಉಗ್ರ ದಾಳಿಯ ವಿಚಾರವಾಗಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ರಿಯಾಕ್ಟ್ ಮಾಡಿದ್ದಾರೆ. “ಕೆಲವು ಜನ ಒಂದು ಕೆನ್ನೆಗೆ ಏಟು ಬಿದ್ರೆ ಇನ್ನೊಂದು ಕೆನ್ನೆ ತೋರಿಸೋದು ಸ್ಮಾರ್ಟ್ ಸ್ಟ್ರಾಟಜಿ ಅಂತ ಹೇಳಿದ್ರು. ಆದ್ರೆ ಈಗ ದೇಶ ಆ ಮೂಡ್ನಲ್ಲಿ ಇಲ್ಲ. ಅದು ನನಗೆ ಪ್ರಾಕ್ಟಿಕಲ್ ಅನ್ಸಲ್ಲ. ಯಾರೋ ಗಡಿಯಾಚೆಗಿನ ಭಯೋತ್ಪಾದನೆಗೆ ಉತ್ತೇಜನ ಕೊಡ್ತಾರೆ ಅಂದ್ರೆ, ಅದನ್ನ ನೋಡ್ಕೊಂಡು ಸುಮ್ನೆ ಇರೋಕಾಗಲ್ಲ. ಅದಕ್ಕೆ ತಕ್ಕ ಪ್ರತಿಕ್ರಿಯೆ ಕೊಡ್ಬೇಕು” ಅಂದಿದ್ದಾರೆ. ಅಲ್ಲದೆ ʻಇಲ್ಲಿ ಎಲ್ರೂ ರೂಲ್ಸ್ ಪ್ರಕಾರ ಆಟ ಆಡ್ಬೇಕು. ಯಾರೋ ರೂಲ್ಸ್ ಬ್ರೇಕ್ ಮಾಡಿದ್ರೆ, ಅದನ್ನ ಒಪ್ಕೊಳ್ಳೋಕಾಗಲ್ಲ ಅಂದಿದ್ದಾರೆ. ಈ ಮೂಲಕ ಪಾಕ್ ಮುಖಕ್ಕೆ ಟವಲ್ ಸುತ್ತಿ ಬಾರಿಸಿದ್ದಾರೆ.
-masthmagaa.com
Contact Us for Advertisement